Friday, August 31, 2012

ಅದ್ಭುತ ಮಾಹಿತಿಯ ಕೇಂದ್ರ ನಮ್ಮ ಬಾಲು ಸರ್


ಗೀಜಗನ ಗೂಡಿನ ಬಗ್ಗೆ ಕೇಳಿದ್ದೆ...ಗುಬ್ಬಚ್ಚಿ ಗೂಡಿನ ಬಗ್ಗೆ ಕೇಳಿದ್ದೆ..

ಈ ಹಕ್ಕಿಗಳು ಮಾನವರ ಕಣ್ಣಿಗೆ ಕಂಡು ಕಾಣರಿಯದ ಎಷ್ಟೋ ಪದಾರ್ಥಗಳನ್ನು ತಂದು, ಚಂದದ ಗೂಡನ್ನು ಕಟ್ಟಿಕೊಳ್ಳುತ್ತವೆ..ಹಕ್ಕಿಗಳು ತಮ್ಮ ಕೊಕ್ಕಿನಲ್ಲಿ ಕಸ ಕಡ್ಡಿಗಳನ್ನು ಕಚ್ಚಿಕೊಂಡು ಹಾರಾಡುತಿದ್ದಾಗ ನಮಗೆ ವಿಸ್ಮಯ..ಏನು ಮಾಡುತ್ತವೆ ಇದನ್ನ..ಅಂತ..ಆದ್ರೆ ಗೂಡು ಕಟ್ಟಿ ಪೂರ್ಣವಾದಾಗ ತನ್ನ ಮರಿಗಳ ಒಡನೆ ಆ ಸುಂದರ ಗೂಡಿನಲ್ಲಿ ವಾಸ ಶುರುಮಾಡಿದಾಗ ಅವು ಪಡುವ ಆನಂದ ಹೇಳತೀರದು...

ಈ ಟಿಪ್ಪಣಿ ಏಕೆ ಅಂದ್ರೆ..ಇದೆ ತಿಂಗಳು ತುಂಬಾ ಪುರುಸೊತ್ತಿನಲ್ಲಿದ್ದಾಗ..ಕಾವೇರಿ ಹಾಗು ಶ್ರೀರಂಗನಾಥರ ಪುಣ್ಯ ಸ್ಥಳವಾದ ಶ್ರೀರಂಗಪಟ್ಟಣದ  ಮೂಲೆ ಮೂಲೆಯನ್ನು ಚಿತ್ರಮಾಲಿಕೆ ಮೂಲಕ ಪರಿಚಯಿಸಿದ ಬಾಲು ಸರ್ ಅವರ ಬ್ಲಾಗ್ ಲೋಕದ ಒಳಗೆ ಹೋಗಿಬಂದೆ.....ಅದರ ಕೊಂಡಿ ಇಲ್ಲಿದೆ http://shwethadri.blogspot.in/

ಅದರ ಬಗ್ಗೆ ನನ್ನ ಲೇಖನ...ಇಲ್ಲಿದೆ.....http://tripping-life.blogspot.in/2012/08/blog-post.html

ಒಂದು ಅದ್ಭುತ ಕನಸಿನ ಪಯಣ ಮಾಡಿಸಿತು..ಬೆಂಗಳೂರಿನ ಒಂದು ಪುಟ್ಟ ಗೂಡಿನಲ್ಲಿ ಕೂತಿದ್ದ ನನಗೆ ಆ ಪಟ್ಟಣದ ಹಿರಿಮೆ ಗರಿಮೆ ಎಲ್ಲವನ್ನು ಪರಿಚಯಿಸಿದ್ದ ಆ ಬ್ಲಾಗ್ ತಾಣ..ಮನಸಿಗೆ ತುಂಬಾ ಖುಷಿ ತಂದಿತ್ತು...ಅರೆ ಬರಿ ಶ್ರೀ ರಂಗಪಟ್ಟಣದ  ಬಗ್ಗೆಯೇ ಇಷ್ಟೊಂದು ಮಾಹಿತಿ ಕೊಟ್ಟಿರುವ ಇವರು ಗಂಧದನಾಡು ಚಿನ್ನದ ಬೀಡು ನಮ್ಮ ಕರುನಾಡಿನ ಬಗ್ಗೆ ಹಾಗು ಅವಳಮ್ಮ ಭಾರತ ಮಾತೆಯ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತೆ ಎನ್ನುವ ಆಸೆಯಿಂದ ಅವರ ನಿಮ್ಮೊಳಗೊಬ್ಬ ಬಾಲು ಎನ್ನುವ ತಾಣವನ್ನು ಓದಲು ಶುರು ಮಾಡಿದೆ...

ಅಬ್ಬ..ಇಲ್ಲಿ ಏನಿಲ್ಲ ಅನ್ನಿಸಿತು...ಮಕ್ಕಳು ತಿನ್ನುವ ಐಯ್ಸ್ ಕ್ಯಾಂಡಿ, ಚಮ್ಮಾರ ಹಾಗು ಸತ್ಯ ಸಂಧತೆ, ಪ್ರಯಾಣಿಕರ ಸಮಯ ಪ್ರಜ್ಞೆ, ಮಾಧ್ಯಮಗಳ ಅಣುಕು ನೋಟ, ಬುದ್ಧಿಜೀವಿಗಳ ಸ್ವಪ್ರತಿಷ್ಠೆ, ಸ್ನೇಹ ಮಾಡಿ ವಿಶ್ವಾಸಾಘಾತಮಾಡುವ ಮಂದಿ..   ಪ್ರಾಮಾಣಿಕ ಉಪಾಧ್ಯಾಯರ ಉತ್ತಮ ಸೇವೆ, ಪ್ರಾಮಾಣಿಕ ಪ್ರಯತ್ನ ಹಾಗು ಯಶಸ್ವಿಯಾದ ಬಿಳಿ ಗಿರಿಯ ಬನದ ವೈದ್ಯರು...ಸಿನೆಮಾಂತರಂಗ ಎಲ್ಲವುಗಳ ಬಗ್ಗೆ ಲೇಖನಗಳು ತುಂಬಿ ತುಳುಕಾಡುತಿತ್ತು...

ಇಷ್ಟೆಯ  ಅಂದುಕೊಂಡಿರ...ಇಲ್ಲ ಇಲ್ಲ..ನನ್ನ ಮೆಚ್ಚಿನ ಹವ್ಯಾಸ ಚಾರಣ... ಇದರ ಬಗ್ಗೆ ಬಾಲು ಸರ್ ಬರೆದಿರುವ ಮಾಹಿತಿಗಳನ್ನ  ಬರೆಯಲು ಒಂದು ಬ್ಲಾಗನ್ನೇ ತೆರೆಯಬೇಕೆನೋ....

ಕತ್ತಲೆ ಬೀಡಾದ ಕಗ್ಗತ್ತಲೇ ಕಾಡು ನಾಗರಹೊಳೆ, ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿ ಗಿರಿ ರಂಗನ ಬೆಟ್ಟ ಹಾಗು ಕಾಡುಗಳು, ಕನಕಪುರದ ಬಳಿ ಇರುವ ಭೀಮನ ಕಿಂಡಿ...ದಿಲ್ಲಿಯ ಪಯಣ, ಮೈಸೂರಿನ ಸುತ್ತ ಮುತ್ತ ಇರುವ ಅನೇಕ ಪ್ರೇಕ್ಷಣೀಯ ತಾಣಗಳು...ಇವನ್ನೆಲ್ಲ ಸೇರಿಸಿ ಒಂದು ಪಟ್ಟಿಯನ್ನೇ ಸಿದ್ಧ ಮಾಡಿಕೊಂಡಿದ್ದೇನೆ...ಅವಕಾಶವಾದಗೆಲ್ಲ..ದೇಹದಲ್ಲಿ ಹುಮ್ಮಸ್ಸಿರುವ ತನಕ ಈ ಜಾಗಗಳನ್ನೆಲ್ಲ ನೋಡಿ, ಛಾಯ ಪೆಟ್ಟಿಗೆಯಲ್ಲಿ ಸೆರೆ ಹಿಡಿದು...ಬ್ಲಾಗ್ ಲೋಕಕ್ಕೆ ತುಂಬಾ ಬೇಕು ಅಂತ...

ಅವರ ಬ್ಲಾಗ್ ಲೋಕದ ಕೊಂಡಿ ಇಲ್ಲಿದೆ..http://nimmolagobba.blogspot.in/

ಅದ್ಭುತ ಮಾಹಿತಿಯ ಕೇಂದ್ರ ನಮ್ಮ ಬಾಲು ಸರ್...ಅವರ ವಿಸ್ಮಯ ಲೋಕದಲ್ಲಿ ಒಮ್ಮೆ ಓಡಾಡಿಬನ್ನಿ..ನಾವು ದಿನ ನೋಡುವ..ಹಾಗು ಗಮನ ಕೊಡದ ಎಷ್ಟೋ ವಿಷಯಗಳು ನಮ್ಮ ಗಮನ ಸೆಳೆಯುವುದಂತು ಖಚಿತ...

Monday, August 20, 2012

ಶ್ರೀ ರಂಗಪಟ್ಟಣದ ದರ್ಶನ - ಬಾಲು ಸರ್ ಮಾರ್ಗದರ್ಶನ...


ಇಂದು ಆಗಸ್ಟ್ ೨೦ನೆ ತಾರೀಕು ೨೦೧೨ ...ರಮ್ಜಾನ್ ಪ್ರಯುಕ್ತ ಕಛೇರಿಗೆ ರಜ ಘೋಷಿಸಿದ್ದರು... ಪ್ರಾತಃಕರ್ಮಗಳನ್ನೆಲ್ಲ ಮುಗಿಸಿ ಕೂತಾಗ ಮನಸ್ಸು ಖಾಲಿ ಖಾಲಿ..ಸರಿ ಏನಾದರು ವಿಶೇಷವಾದ ಕೆಲಸ ಮಾಡೋಣ ಅನ್ನಿಸಿತು..

ಮೊದಲಿನಿಂದಲೂ ವಿಷ್ಣುವಿನ ಕೆಲ ಅವತಾರಗಳು, ರೂಪಗಳು ಬಲು ಇಷ್ಟ...ಕೃಷ್ಣ, ವೆಂಕಟೇಶ್ವರ, ರಂಗನಾಥ..ಹೀಗೆ..

ಅಚಾನಕ್ಕಾಗಿ ಶ್ರೀರಂಗ ಪಟ್ಟಣಕ್ಕೆ ಹೋಗೋಣ ಅನ್ನಿಸಿತು..ಆದ್ರೆ ಕಳೆದ ಶನಿವಾರ ಸಂಬಂಧಿಕರೊಬ್ಬರು ಇಹಲೋಕ ತ್ಯಜಿಸಿದ್ದರಿಂದ..ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದಿದ್ದರಿಂದ, ಹಾಗು ಮನೆಯಲ್ಲಿ ಇನ್ನು ಸೂತಕವಿದ್ದುದರಿಂದ ಜನಿವಾರ ಬದಲಾಯಿಸಿರಲಿಲ್ಲ..ಹಾಗಾಗಿ ದೇವಸ್ಥಾನದ ಭೇಟಿಯ  ಸಾಧ್ಯಸಾಧ್ಯತೆಗಳು ಇರಲಿಲ್ಲ..

ಚಿತ್ರ ಕೃಪೆ..ಅಂತರ್ಜಾಲ
ಏನೋ ಮಾಡಲಿ ನಾನು ಏನು ಮಾಡಲಿ..ಈ ತವಕ ಜಾಸ್ತಿಯಾಯಿತು...ಸರಿ ಶ್ರೀ ರಂಗನಾಥನನ್ನೇ ಕೇಳೋಣ ಅಂತ ಮನಸಲ್ಲಿ ಅಂದುಕೊಂಡು... ಕೈ ಮುಗಿದೇ...ಸ್ವಾಮೀ ನಿನ್ನ ದರುಶನ ಮಾಡಬೇಕು...ಶ್ರೀ ರಂಗಪಟ್ಟಣದ  ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನನ್ನ ಕುಟುಂಬಕ್ಕೆ ತೋರಿಸಬೇಕು..ಹಾಗೆಯೇ...ಸಧ್ಯದ ಕಷ್ಟವನ್ನು ತಡೆದುಕೊಳ್ಳುವ ಗಟ್ಟಿ ಮನಸನ್ನು ಕೊಡು ಎಂದು ಕೇಳುತ್ತಿದ್ದಾಗ...

ಶ್ರೀರಂಗ ಕಣ್ಣ ಮುಂದೆ ಬಂದಂತಾಗಿ ..."ಶ್ರೀಕಾಂತ...ನಿನ್ನಂತೆ ಹಲವಾರು ಭಕ್ತರು ಇದೆ ವಿಧವಾದ ಹಲವಾರು ಕೋರಿಕೆಗಳನ್ನು ಸಲ್ಲಿಸುತ್ತಾ ಇದ್ದಾರೆ ...ನಾನು ಅವರಿಗೆ ಉತ್ತರ ಹೇಳಿ ಹೇಳಿ ಸುಸ್ತಾಗಿ ಮಲಗಿ ಬಿಟ್ಟಿದ್ದೇನೆ...ನೋಡು ನಾನು ಇರುವ ಪರಿ ಕೆಳಗಿನ ಚಿತ್ರದಲ್ಲಿರುವಂತೆ ಇದ್ದೇನೆ...."
ಚಿತ್ರ ಕೃಪೆ..ಅಂತರ್ಜಾಲ
"ಮೈಸೂರಿನಲ್ಲಿರುವ ಬಾಲಸುಬ್ರಮಣ್ಯ ಅಥವಾ ಎಲ್ಲರಿಗೂ ಚಿರಪರಿಚಿತರಾಗಿರುವಂತೆ "ಬಾಲು" ಎನ್ನುವರು ಇಂದಿಗೆ ಸರಿಯಾಗಿ ಎರಡು ವರ್ಷಗಳಿಂದ ಶ್ರೀರಂಗ ಪಟ್ಟಣದ ಇತಿಹಾಸ, ಮಹತ್ವ, ಅದರ ಚಿತ್ರಗಳು ಎಲ್ಲವನ್ನು ವಿವರಿಸುತ್ತ ಬಂದಿದ್ದಾರೆ..ಅದನ್ನು ಓದಿ, ನಲಿ, ಮತ್ತು ಆ ಎಲ್ಲ ಜಾಗಗಳಿಗೆ ನೀನು ಒಮ್ಮೆ ಭೇಟಿ ಕೊಡು.. ಇದು ನನ್ನ ಆಜ್ಞೆ,,ಹಾಗು ಆಶೀರ್ವಾದ..ಹಾಗೆಯೇ..ಬಾಲು ಅವರು ಶ್ರಮವಹಿಸಿ ಮಾಡುತ್ತಿರುವ ಈ ಸುವರ್ಣ ಕಾರ್ಯಕ್ಕೆ ಒಂದು ಕೃತಜ್ಞತೆ ಹೇಳಿದ ಹಾಗೆ ಆಗುತ್ತೆ..."
http://shwethadri.blogspot.in/2010/08/blog-post.html
ಸರಿ ಆದೇಶ ಬಂದ ನಂತರ...ಓದುತ್ತ ಹೋದೆ...ಸುಮಾರು ೧೩೦೦-೧೪೦೦ ವರುಷಗಳ ಹಿಂದೆ ಕರೆದೊಯ್ಯಿತು ಬಾಲು ಸರ್ ಅವರ ಲೇಖನಗಳು..
ಶ್ರೀರಂಗ ಪಟ್ಟಣದ ಉದಯ,
ಅದರ ಮಹತ್ವ,
ಜಗತ್ತಿನಾದ್ಯಂತ ಅದರ ಪರಿಚಯ,
ಐತಿಹಾಸಿಕ ಕ್ಷಣಗಳಿಗೆ ಮೂಕವಾಗಿ ನಿಂತದ್ದು,
ಎಷ್ಟೋ ತಂತ್ರಜ್ಞಾನಗಳಿಗೆ ಮೊದಲ ಮೆಟ್ಟಿಲಾದದ್ದು,
ತನ್ನ ಹೆಸರನ್ನು ದೇಶ ವಿದೇಶಗಳಲ್ಲಿ ಹಬ್ಬಿದ್ದು,
ಆಸ್ಟ್ರೇಲಿಯಾ ಖಂಡದಲ್ಲಿ ತನ್ನ ಹೆಸರಿಂದ ಪ್ರಖ್ಯಾತವಾದದ್ದು
ಹೀಗೆ ಅಲ್ಲಿನ ಪ್ರತಿಯೊಂದು ಕಲ್ಲು,  ಮಣ್ಣು, ನೀರು, ಗಾಳಿ ಎಲ್ಲವಕ್ಕೂ ಅದರದೇ ಆದ ವೈಶಿಷ್ಟ್ಯ, ಇತಿಹಾಸಗಳು, ಪ್ರಾಮುಖ್ಯತೆ ಓದುತ್ತ ಹೋದ ಹಾಗೆ ಮೈ ಮನ ಹಾಗೆಯೇ  ಒಮ್ಮೆ ಜುಮ್ಮೆಂದಿತು...

ಸುಮಾರು ಎರಡು ಘಂಟೆಗಳಲ್ಲಿ ೧೦೦೦ ವರುಷಕ್ಕು ಮಿಕ್ಕಿದ ಇತಿಹಾಸವನ್ನು ಉಣಬಡಿಸಿದ ಸದಾ ನಗು ಮೊಗದ ಬಾಲು ಸರ್ ಅವರ ಲೇಖನಗಳಿಗೆ ನನ್ನ ಒಂದು ನಮನಗಳು...

http://shwethadri.blogspot.in/2010/08/blog-post.html

ಗೆಳೆಯರೇ, ದಯವಿಟ್ಟು ಬಿಡುವುಮಾಡಿಕೊಂಡು ಈ ತಾಣಕ್ಕೆ ಭೇಟಿ ನೀಡಿ..ಹಾಗು ನಮ್ಮ ಹೆಮ್ಮೆಯ ಶ್ರೀ ರಂಗ ಪಟ್ಟಣದ ಇಂಚಿಂಚು ಇತಿಹಾಸವನ್ನು ಅರಿಯಿರಿ..ಹಾಗೆಯೆ ಮೈಸೂರ್ ಕಡೆ ಹೋಗುವಾಗ ಹಾಗೆಯೇ ಆ ಸ್ಥಳಗಳಿಗೂ ಸದಾ ಭೇಟಿ ನೀಡುತ್ತಾ ಇರಿ...ಬಾಲು ಸರ್...ಕಾವೇರಿ ರಂಗ