Wednesday, December 31, 2014

ಕುಮಾರ ಪರ್ವತ ಕಳಿಸಿದ, ಕಲಿಸಿದ ಪಾಠ.. ಆರನೇ ಬಾರಿ ಚಾರಣ

ಗೊಬ್ಬರದ ಗುಂಡಿಯೇ ವಾಸಿ.. ದುರ್ನಾತ ಇದ್ದರೂ.. ಸಸ್ಯ ಸಂಪತ್ತು ಚಿಗುರಲು ಕಾರಣವಾಗುತ್ತದೆ.. ನನ್ನ ತಲೆ ಅದಕ್ಕಿಂತ ಅತ್ತತ್ತ ಆಗಿತ್ತು.. ಯೋಚಿಸಿದ್ದು ಉಲ್ಟಾ.. ಅನಿಸಿದ್ದು ಉಲ್ಟಾ.. ಪ್ರೀತಿ ವ್ಯಕ್ತ ಪಡಿಸಿದ್ದು ಉಲ್ಟಾ.. ಎಲ್ಲಾ ಕಲಸು ಮೇಲೋಗರವಾಗಿತ್ತು.. ಕನ್ನಡಿ ನೋಡಿಕೊಂಡೆ.. ಮುಖದಲ್ಲಿ ಯಾವ ಭಾವವೂ ಬದಲಾಗಿಲ್ಲ.. ತಲೆ ನೋಡಿಕೊಂಡೆ ಹುಲುಸಾಗಿ ಬೆಳೆದ ತಲೆಗೂದಲನ್ನು ಕತ್ತರಿಸಿ ಆಗಿತ್ತು.. ಹೃದಯ ಮುಟ್ಟಿನೋಡಿಕೊಂಡೆ.. ಆತ್ಮೀಯರಿಗೆ ಮಿಡಿಯುತ್ತಿದ್ದ ಮನಸ್ಸು "ಲೋ ನಿನಗಾಗಿ ಮಿಡಿಯಲು ಶುರುಮಾಡಿಕೋ.. ನೀನಿದ್ದರೆ ಇತರರು ಇರುತ್ತಾರೆ.. ನೀನೆ ನೀನಾಗದೆ ಅವರಾದರೆ ನಿನಗೆ ಜಾಗವೇ ಇರೋಲ್ಲ.. ಇದುವರೆಗೂ ನೀ ಇತರರಿಗೆ ಬದುಕಿದ್ದು ಸಾಕು.. ಇನ್ನು ನೀನು ನಿನಗಾಗಿ ಬದುಕು.. " ಎಂದಿತು. 

ಅರೆ ಏನಾಗಿದೆ.. ನನಗೆ.. 

ನನ್ನ ಪ್ರೀತಿಯ ಕುಮಾರ ಪರ್ವತದ ತುತ್ತ ತುದಿಯಲ್ಲಿ ನನ್ನ ಮಾಮೂಲಿ ಧ್ಯಾನಕ್ಕೆ ಕೂರುವ ಮುನ್ನ ಮೇಲಿನ ಎಲ್ಲಾ ಸಾಲುಗಳು ಎಲ್ ಇ ಡಿ ಪರದೆಯ ಮೇಲೆ ಹಾದುಹೋಗುವಂತೆ ಜುಯ್ ಜುಯ್ ಅಂಥಾ ಓಡುತ್ತಿತ್ತು. 

ಕಣ್ಣು ಮುಚ್ಚಿ ಕೂತೆ.. ಕೆಳಗಿನ ಪರದೆ ಕಂಡಿತು.. 
_________________________________________________________________________________











































_______________________________________________________________________________
ಗಾಬರಿ ಆದಿರಾ.. ಹೌದು ಇದೆ ದೃಶ್ಯ ಮುಚ್ಚಿದ ಕಣ್ಣ ಒಳಗಿನ ಪರದೆಯ ಮೇಲೆ ಮೂಡಿ ಬಂದದ್ದು. ಯಾವಾಗಲೂ ಅಪ್ಪ ಕಣ್ಣ ಮುಂದೆ ಬರುತ್ತಿದ್ದರು ಆಶೀರ್ವಾದದ ಭಂಗಿಯಲ್ಲಿ.. ಆದರೆ ಇಂದು ಯಾರೂ ಇಲ್ಲ.. ಏನೂ ಇಲ್ಲ.. ಖಾಲಿ ಖಾಲಿ ಬೆಳ್ಳಿ ಪರದೆ.. 
ನನ್ನ ಮಾರ್ಗದರ್ಶಿಯಂಥಹ ಗೆಳತಿ ನಿವಿ ಹೇಳಿದ್ದು.. ಶ್ರೀ ಇದು ಶುಭ ಸೂಚನೆ.. ನೀವು ಅಂದುಕೊಂಡಿದ್ದು ಸಾಧಿಸುತ್ತೀರಿ.. ನಿಮ್ಮ ಅಪ್ಪ ಸರಿಯಾಗಿ ಮಾರ್ಗದರ್ಶನ ನೀಡಿದ್ದಾರೆ.. ಸುಂದರ ವಸಂತ ನಿಮಗಾಗಿ ಕಾಯುತ್ತಿದೆ ಎಂದರು.. 

ನನ್ನ ಆಪ್ತ ಮಿತ್ರ ಹಾಗೂ ಸಹ ಚಾರಣಿಗ "ಸಂದೀಪ್" ಚಾರಣ ಮುಗಿದ ಮೇಲೆ ಹೇಳಿದ್ದು "ಶ್ರೀ.. ಆರಂಭದಲ್ಲಿಯೇ ಅಂದುಕೊಂಡೆ ನಿಮ್ಮ ಮೆದುಳು..  ಮೈ..  ಎರಡು ಹಾಳಾಗಿ ಹೋಗಿದೆ.. ಅದನ್ನ ಸರಿಮಾಡಿಕೊಳ್ಳಲು ಈ ಚಾರಣ ಸಿದ್ಧ ಮಾಡಿದ್ದೀರಿ ಅಲ್ಲವೇ .. ಮೇಲೆ ಕತ್ತೆತ್ತಿ ನೋಡಿದೆ.. ಪಡೆಯಪ್ಪ ಚಿತ್ರದಲ್ಲಿ ರಜನಿ ಹೊಡೆಯುವ ಸಲ್ಯೂಟ್ ಶೈಲಿಯಲ್ಲಿ ನನ್ನ ಅಪ್ಪ.. ಆಲ್ ದಿ ಬೆಸ್ಟ್ ಶ್ರೀ ಎಂದು ಹೇಳಿ ಸಲ್ಯೂಟ್ ಹೊಡೆದ ಹಾಗೆ ಅನ್ನಿಸಿತ್ತು.. ಹಾಗೆ ಸುಮ್ಮನೆ ಎರಡು ದಿನ ಹಿಂದಕ್ಕೆ ಹೋದೆ.. ಅನಾವರಣಗೊಂಡಿತ್ತು.. ಕುಮಾರ ಪರ್ವತದ ಚಾರಣದ ಹೂರಣ.. 
* * * * * *

೨೦೧೩ ನಂತರ ಅಲೆಮಾರಿಗಳು ತಂಡ ಎಲ್ಲಿಯೂ ಹೋಗಿರಲಿಲ್ಲ.. ಕುಮಾರಪರ್ವತ ಚಾರಣವೇ ಕಡೆಯದಾಗಿತ್ತು.. ನನ್ನ ಹಠ ಮತ್ತೆ ಅಲ್ಲಿಂದಲೇ ಶುರುಮಾಡೋಣ ಎಂದು.. ಎಂದಿನಂತೆ ಸಂದೀಪ್ ಜೊತೆಯಾದರು.. ಅವರ ಜೊತೆಯಲ್ಲಿ ದರ್ಶನ್ ನಾ ಬರುವೆ ಅಂದರು. . ಶುರುವಾಯಿತು ನಮ್ಮ ಪಯಣ.. 

ಬೆಳಗಿನ ಚುಮು ಚುಮು ಚಳಿಯಲ್ಲಿ ಮಂದಗತಿಯಲ್ಲಿ ಹೆಜ್ಜೆ ಹಾಕುತ್ತಾ ಚಾರಣದ ಆರಂಭಿಕ ತಾಣಕ್ಕೆ ಬಂದೆವು. ಮನದಲ್ಲಿ ವಂದಿಸಿದೆ. ಸೂರ್ಯ ರಶ್ಮಿ ಮೈ ಮೇಲೆ ಬಿದ್ದ ಹಾಗೆ ಆಯಿತು.. ಆಶೀರ್ವಾದ ಸಿಕ್ಕಿತು ಎಂದು ಹೊರಟೆ. 

ಮೂಕ ಮನಸ್ಸು.. ಬಳಲುವ ದೇಹ ಚಾರಣಕ್ಕೆ ಹೇಳಿ ಮಾಡಿಸಿದ ಜೋಡಿ: (ಮೊದಲನೇ ಪಾಠ)
ಕಾಡುತ್ತವೆ ಸರಮಾಲೆಯ ಕಷ್ಟಗಳು.. ಗಟ್ಟಿ ತನ ಇದ್ದಾಗ ಅದು ಮುಟ್ಟಲು ಬರುವುದಿಲ್ಲ 
ದೇಹ ಕೇಳುತ್ತಿರಲಿಲ್ಲ.. ಮನಸ್ಸು ಬಿಡುತ್ತಿರಲಿಲ್ಲ.. ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಸಾಗಿದೆವು. ಮೊದಲ ಕಾಡು ದಾರಿ ಆಯಾಸದಾಯಕವಾಗಿದ್ದರೂ.. ಹಾಸ್ಯವೂ ಎಂದಿನಂತೆ ಕಡಿಮೆ ಇದ್ದರೂ ಕೂಡ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ.. ಜೊತೆಯಲ್ಲಿಯೇ ಹಾದಿ ನಮಗೋಸ್ಕರ ಹತ್ತಿರವಾಗುತ್ತಿದೆ ಎನ್ನಿಸಿತು. ಭೀಮನ ಕಲ್ಲಿಗೆ ಹೋಗುವಷ್ಟರಲ್ಲಿಯೇ ಬಸವಳಿದು ಹೋಗುತ್ತಿದ್ದ ನಾನು.. ಸ್ವಲ್ಪ ಹೊತ್ತಿನಲ್ಲಿಯೇ ಭೀಮನ ಕಲ್ಲಿನ ಮೇಲೆ ವಿರಮಿಸಿಕೊಳ್ಳುತ್ತಿದ್ದೆವು.. ನಂತರ ಅರಿವಾಯಿತು.. ಸಾಧಿಸಲು ಹೊರಟಾಗ ಮನಸ್ಸು ದೇಹ ಎರಡು ಹೇಗೆ ಇದ್ದರೂ ಗಂಡ ಹೆಂಡತಿಯ ಹಾಗೆ ಜೊತೆ ಜೊತೆಯಲ್ಲಿ ಸಾಗಿದರೆ ಮಾತ್ರ ಯಶಸ್ಸು ಶತಃ ಸಿದ್ಧ ಎಂದು. ಎಷ್ಟು ನಿಜ.. 


ಎಲ್ಲೋ ಇರುವ ಎರಡು ವಸ್ತುಗಳನ್ನು ಜೊತೆ ಮಾಡಿ ಉಪಾಯ ಕಂಡುಕೊಳ್ಳಿ  : (ಎರಡನೇ ಪಾಠ)
ಚಾರಣದಲ್ಲಿ ಎಂದಿಗೂ ಹೊಟ್ಟೆಗೆ ಮೋಸ ಮಾಡಿಕೊಳ್ಳದ ನಾವು.. ವಿಚಿತ್ರ ಸ್ಥಿತಿಯಲ್ಲಿ ಈ ಚಾರಣಕ್ಕೆ ಹೊರಟೆವು.. ಹಾದಿಯಲ್ಲಿ ಸಿಕ್ಕ ಸಹ ಚಾರಣಿಗರು ಮೊದಲ ಬಾರಿಗೆ ಎಂದರೂ.. ಅವರ ಸಿದ್ಧತೆ ಸಕತ್ತಾಗಿತ್ತು.. ಕುಮಾರಪರ್ವತದಲ್ಲಿ ಸಿಗುವ ಕಾಮಧೇನು ಭಟ್ಟರ ಮನೆ.. ಅಲ್ಲಿಗೆ ಹೋಗಿ ಅನ್ನವನ್ನು ತೆಗೆದುಕೊಂಡು ನಿಂತಾಗ.. ಬೇಕೇ ಬೇಡವೇ.. ಎನ್ನುವ ಗೊಂದಲ ಇತ್ತು. ಆದರೆ ಹೊಟ್ಟೆಯನ್ನೊಮ್ಮೆ ಸವರಿಕೊಂಡೇ.. ಬೇಕು ಶ್ರೀ ಎಂದಿತು.. ದೇಹವನ್ನು ದಂಡಿಸುವಾಗ ಮಧ್ಯೆ ಮಧ್ಯೆ ಅದಕ್ಕೆ ತುಸು ಉಪಚಾರವನ್ನು ಮಾಡಲೇ ಬೇಕು.. ಎಂದಿತು ಮನಸ್ಸು. ತೆಗೆದುಕೊಂಡದ್ದು ಒಳ್ಳೆಯದೇ ಆಯ್ತು... ಕಲ್ಲು ಮಂಟಪದ ಬಳಿ ಸಹಚಾರಣಿಗರು ತಂದಿದ್ದ ಪುಳಿಯೋಗರೆ ಗೊಜ್ಜು.. ಬಿಸಿ ಅನ್ನಕ್ಕೆ ಜಂಟಿಯಾಗಿ ನಿಂತು ಹೊಟ್ಟೆಯನ್ನು ಅರಳಿಸಿತು. ಕಷ್ಟಗಳನ್ನು ಸ್ವಲ್ಪ ಸ್ವಲ್ಪವೇ ನಿವಾರಿಸುತ್ತ ಹೋಗಬೇಕು.. ಆಗಲೇ ಕೆಲವು ಕಷ್ಟಗಳ ಜೊತೆಯಲ್ಲಿ ಕೆಲವು ಉಪಾಯಗಳು ಕೂಡ ಹೆಜ್ಜೆ ಹಾಕುತ್ತವೆ. 
ಒಮ್ಮೆ ಕಣ್ಣು ಬಿಟ್ಟರೆ ಸಾಕು.. 

ಸುಡುವ ಜ್ಯೋತಿಯನ್ನೆ ಮನೆ ಬೆಳಗಲು ಉಪಯೋಗಿಸಿದರೆ: (ಮೂರನೇ ಪಾಠ)
ಕಲ್ಲು ಮಂಟಪದ ಮುಂದಿನ ಹಾದಿ ಬಲು ತ್ರಾಸದಾಯಕ.  ಏರು ಹಾದಿ, ನೆರಳಿಲ್ಲದ ಬಿರುಬಿಸಿಲಿನಲ್ಲಿ ನಡೆಯುವುದು ನಿಜಕ್ಕೂ ಸವಾಲಿನ ಗುರಿಯೇ ಹೌದು. ಆದರೂ ಆ ಬಿರು ಬಿಸಿಲಿನಲ್ಲಿ ತುಂಬಿದ ಹೊಟ್ಟೆ ಹೇಳಿತು.. ನಾ ಸಂತುಷ್ಟನಾಗಿದ್ದೇನೆ.. ನಾ ಇರುವೆ ನಿಮ್ಮ ಜೊತೆಯಲ್ಲಿ ನಡೆಯಿರಿ ಎಂದಿತು. ಒಳಗೆ ಜಠರಾಗ್ನಿ ತಣ್ಣಗಾಗಿತ್ತು.. ಹೊರಗೆ ಬಿಸಿಲಿನ ಬೆಂಕಿ ದೇಹವನ್ನು ಸುಡುತಿತ್ತು.  ಆಗ ಮನಕ್ಕೆ ಬಂದಿದ್ದು ವಜ್ರವನ್ನು ವಜ್ರದಿಂದ ಕತ್ತರಿಸಬಹುದಾದರೆ ಬೆಂಕಿಯನ್ನು ಬೆಂಕಿಯಿಂದ ಏಕೆ ಆರಿಸಲಾಗದು.. ಹಾಗೆಯೇ ಮನದ ಮೂಲೆಯಲ್ಲಿರುವ ಕಸವನ್ನು ರಸವನ್ನಾಗಿ ಮಾಡಿ ಆ ಕಸಕ್ಕೆ ಹೊಸದು ರೂಪ ಕೊಡಬಹುದು ಎನ್ನಿಸಿತು. ಆ ಬಿಸಿಲಿನಲ್ಲಿಯೇ ಮಲಗಿ ನಿದ್ದೆ ಮಾಡಿದೆ.. ಆಹಾ ಎಷ್ಟು ಸೊಗಸಾಗಿತ್ತು. ಬಿಸಿಲಿನ ಜಾಲಕ್ಕೆ ಒಳಗಿನ ಗೊಂದಲಮಯ ಮಿಕ ಶರಣಾಗಿತ್ತು.. ಹೊಸ ಉತ್ಸಾಹದಿಂದ ಮುಂದೆ ಸಾಗಿದೆ. ಕಷ್ಟಗಳು ಇರುತ್ತವೆ ಬರುತ್ತವೆ.. ಆದರೆ ಆ ಕಷ್ಟಗಳು ನಮ್ಮನ್ನು ಕತ್ತರಿಸಲು ಬಿಡದೆ ಅವಕ್ಕೆ ಇನ್ನಷ್ಟು ಕಷ್ಟಗಳನ್ನು ಕೊಟ್ಟು ಅವೇ ಬಡಿದಾಡುವಂತೆ ಮಾಡಿ.. ಹೊಸ ರೂಪ/ಉಪಾಯ ಕಂಡು ಕೊಳ್ಳಬೇಕು. 
ಎದುರಿಸಿ ನಿಲ್ಲಬೇಕು.. ಉರಿಯುವ ಸೂರ್ಯನು ಕೆಲಕಾಲ
 ಮರೆಯಾಗುತ್ತಾನೆ 

ಹಾದಿಯಲ್ಲಿ ಸಿಗುವ ಉತ್ಸಾಹದ ಚಿಲುಮೆಯನ್ನು ಚಿಮ್ಮು ಹಲಗೆಯಂತೆ ಬಳಸಬೇಕು: (ನಾಲ್ಕನೇ ಪಾಠ)
ಶೇಷ ಪರ್ವತದ ಹಾದಿಯಲ್ಲಿ ಮನಸ್ಸಿಗೆ ದೇಹಕ್ಕೆ ಬಯ್ದು ಬಿಡುವಷ್ಟು ಕೋಪ ಬರುತ್ತದೆ. ಏರು ಹಾದಿ, ಬಿರು ಬಿಸಿಲು, ಕಾಲುಗಳು ಪದ ಹೇಳುತ್ತಿರುತ್ತವೆ. ಬೆನ್ನಿನ ಮೇಲೆ ಭಾರ, ಸಾಕಪ್ಪ ಎನ್ನಿಸುತ್ತದೆ. ವಾಪಸ್ ಹೋಗಿ ಬಿಡೋಣ ಅನ್ನಿಸುವುದು ನಿಜವಾದ ಮಾತು. ಅಂಥಹ ಗೊಂದಲಮಯ ಸನ್ನಿವೇಶದಲ್ಲಿ ಸಿಗುತ್ತದೆ ಕಣಿವೆ ಪ್ರದೇಶ. ಆಹಾ ಆ ತಾಣದಲ್ಲಿ ಕೂತಾಗ, ಸುತ್ತಲಿನ ಕಣಿವೆ ಪ್ರದೇಶದಿಂದ ಅನೇಕ ಗಿಡ ಮೂಲಿಕೆ ಮರಗಳನ್ನು ಬಳಸಿಬರುವ ಗಾಳಿ ಮನಸ್ಸಿಗೆ ಹಾಯ್ ಎನ್ನಿಸುವಷ್ಟು ಆಹ್ಲಾದ ಕೊಡುತ್ತದೆ. ಆ ಕಣಿವೆ ಪ್ರದೇಶದಲ್ಲಿ ಕಾಣಿಸುವ ರುದ್ರ ಸೌಂದರ್ಯ ಎಂಥವರನ್ನು ಮೂಕನನ್ನಾಗಿಸಿ ಬಿಡುತ್ತದೆ. ಅಲ್ಲಿಯೇ ಕೊಂಚ ಹೊತ್ತು ಕೂತಾಗ ಅರಿವಾಗುವ ಸತ್ಯ, ಇಲ್ಲಿಯೇ ಇಂಥಹ ಸೌಂದರ್ಯ ನಮಗೋಸ್ಕರ ಇಟ್ಟಿರುವ ಕಾಣದ ಶಕ್ತಿ, ಈ ಸೌಂದರ್ಯವನ್ನು ನೋಡಿ ಮನಸ್ಸಿಗೆ ಸಂತೋಷ ಸಿಕ್ಕಾಗ, ಅದರ ನೆರಳಲ್ಲಿ ಸಾಗಿದರೆ ಗುರಿ ಕಾಲು ಬುಡದಲ್ಲಿ. ನಿಜ ಈ ಮಾತು, ಸಿಕ್ಕ ಅವಕಾಶವನ್ನು ಚಿಮ್ಮು ಹಲಗೆಯಂತೆ ಉಪಯೋಗಿಸಿ ನಮ್ಮ ಗುರಿಯತ್ತ ಧೈರ್ಯ ಮಾಡಿ ಸಾಗಬೇಕು.. ಆಗ ನಾ ಹೇಳಬಹುದು ಗೆಲುವು ನನ್ನದೇ. 
ಎದುರಿಗೆ ಬರುವ ಕಷ್ಟಗಳು ದೂರದ ಕನಸನ್ನು ನನಸು ಮಾಡುತ್ತವೆ 

ಗುರಿ ಮುಂದಿದ್ದಾಗ.. ವಿರಮಿಸಬಾರದು: (ಐದನೇ ಪಾಠ)
ಹೆಜ್ಜೆ ಹೆಜ್ಜೆ ಇಡುತ್ತ ಕೃಷ್ಣ ಗೋಕುಲವನ್ನೆಲ್ಲ ಸುತ್ತಿ ಬಂದಾ ಹಾಗೆ, ನಾವು ಹೆಜ್ಜೆ ಹೆಜ್ಜೆ ಅಡಿಯಿಟ್ಟು ಶೇಷಪರ್ವತದ ತುತ್ತ ತುದಿಗೆ ಬಂದು ನಿಂತೆವು. ಸುತ್ತಲು ವಿಹಂಗಮ ದೃಶ್ಯ. ನಾವು ಹತ್ತಿ ಬಂದ ಹಾದಿಯನ್ನು ಒಮ್ಮೆ ಅವಲೋಕನ ಮಾಡಿದೆವು. ಸೂರ್ಯಾಸ್ತ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಆದರೆ ನಮ್ಮ ಗುರಿ ಇದ್ದದ್ದು ಕುಮಾರ ಪರ್ವತದ ತುತ್ತ ತುದಿ ಮತ್ತು ಅಂದಿನ ರಾತ್ರಿ ಅಲ್ಲಿಯೇ  ಕಳೆಯುವುದು. ನೀರಿಲ್ಲ ಎಂದು ಅರಿವಾಯಿತು, ಮುಂದೆ ನೀರು ಸಿಗುವ ಲಕ್ಷಣಗಳು ಇರಲಿಲ್ಲ. ಆದರೆ ನಮ್ಮ ಗುರಿ ಇದ್ದದ್ದು ತುತ್ತ ತುದಿಯಲ್ಲಿ ನಮ್ಮ ವಿಶ್ರಾಂತಿ ಎಂದು. ಜೊತೆಯಲ್ಲಿ ತಂದಿದ್ದ  ಗುಡಾರಗಳು ನಮ್ಮನ್ನು ಹೊರಗೆ ಬಿಡಿ ಎಂದು ಕಿರುಚಿಕೊಳ್ಳುತ್ತಿದ್ದವು. ಭಾರವಾದ ಹೆಜ್ಜೆಯನ್ನು ಮತ್ತೆ ಮುಂದಡಿ ಇಡಲು ಶುರುಮಾಡಿದೆವು. ಗುರಿ ಮುಂದೆ ಕಾಣುವಾಗ ಕೊಂಚ ವಿಶ್ರಾಂತಿ ಬಾಳಿನ ಗುರಿಯನ್ನು ಬದಲಿಸಿಬಿಡುತ್ತದೆ ಅಥವಾ ಗುರಿ ದಾರಿ ಕಾಣದೆ ಮಂಕಾಗಿ ಬಿಡುತ್ತದೆ. 

ಬಣ್ಣ ಬಣ್ಣದ ಹೊಂಗಿರಣಗಳು - ಅವಕಾಶಗಳ ಸುರಿಮಳೆ 


ಪಟ್ಟ ಶ್ರಮಕ್ಕೆ ಪ್ರತಿ ಫಲ ಇದ್ದೆ ಇದೆ. : (ಆರನೇ ಪಾಠ)
ಕೊರೆಯುವ ಚಳಿ, ಸುಮಾರಾಗಿ ತುಂಬಿದ ಹೊಟ್ಟೆ, ಇನ್ನೂ ಹಸಿವು, ಆಯಾಸ ಎಂದು ಹೇಳುತ್ತಿದ್ದ ದೇಹ, ಎಲ್ಲವೂ ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತ್ತು. ಆದರೆ ಬೆಳಗಿನ ಸೂರ್ಯಾಸ್ತ ನೋಡಲು ಹಾತೊರೆಯುತ್ತಿತ್ತು.  ಆದರೆ ಆ ಚಳಿಗೆ ದೇಹದ ಮೂಳೆಯೇ ನಡುಗುತ್ತಿತ್ತು ಅಂದರೆ ತಪ್ಪಲ್ಲಾ. ಸಿಕ್ಕ ಎಲ್ಲಾ ತಿನ್ನುವ ಪದಾರ್ಥಗಳನ್ನು ತಿಂದು ಮುಗಿಸಿ ಮೆಲ್ಲಗೆ ಗುಡಾರದ ಒಳಗೆ ನುಗ್ಗಿದೆವು. ನನ್ನ ಮತ್ತು ಸಂದೀಪ್ ಬಳಿ ಮಲಗುವ ಚೀಲವಿತ್ತು, ಆದರೆ ದರ್ಶನ್ ಪಾಪ ಚಳಿಯಿಂದ ರಾತ್ರಿ ಇಡಿ ನಡುಗುತ್ತಾ ಕಳೆದರು, ಗುಡಾರದ ಒಳಗೆ ಮಲಗಿದ್ದೆವು ಅನ್ನುವುದಷ್ಟೇ ನಮಗೆ ಶ್ರೀ ರಕ್ಷೆಯಾಗಿತ್ತು..ಬೆಳಿಗ್ಗೆ ಎಂದು ಆಗಸವನ್ನು ಹಾಗೆ ನೋಡಿದಾಗ, ಕಲಾವಿದ ತನ್ನ ಕುಂಚದಿಂದ ಅರಳಿಸಿದ ವರ್ಣಭರಿತ ಆಗಸವನ್ನು ನೋಡಿದಾಗ ಅಬ್ಬಬ್ಬ ಎನ್ನಿಸಿತು. ಇದುವರೆಗೂ ಪಟ್ಟ ಪರಿಶ್ರಮ ಸಾರ್ಥಕ ಅನ್ನಿಸಿದ್ದು ಈಗಲೇ. ಶ್ರಮ ಪಡಲೇಬೇಕು, ಶ್ರಮ ಪಟ್ಟಷ್ಟು ಅದರ ಸವಿ ರುಚಿಯಾಗಿರುತ್ತದೆ. 
ಚಿತ್ರಕೃಪೆ - ಸಂದೀಪ್ 

ಅರಿ ಷಡ್ವರ್ಗಗಳು ನಮ್ಮನ್ನು ಕಾಡಿ ಹಿಂಡಿ ಹಿಪ್ಪೆ ಮಾಡುತ್ತದೆ. ಆದರೆ ಅದನ್ನೇ ನಮಗೆ ಬೇಕಾದಂತೆ ಉಪಯೋಗಿಸಿಕೊಂಡು ಅವುಗಳನ್ನು ಮೆಟ್ಟಿ ನಿಲ್ಲುತ್ತಾ, ನಮ್ಮ ಗುರಿಯತ್ತ ಸಾಗಲೇ ಬೇಕು. ಆಗ ಅರಿಗಳು ವರ್ಗವಾಗಿ ದಾರಿ ಕೊಡುತ್ತಾ ನಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತವೆ. 

ಇಂಥಹ ಒಂದು ಸುಂದರ ಸಂದೇಶವನ್ನು ಕುಮಾರಪರ್ವತ ನನಗಾಗಿ ಕಾದಿರಿಸಿತ್ತೇನೋ ಅನ್ನಿಸಿತು. ಹೌದು ಮೇಲೆ ಕಲಿತ ಆರು ಪಾಠಗಳು ಒಂದಕ್ಕಿಂತ ಒಂದು ತಾಳ ಮೆಳೈಸಿಕೊಂಡು ಒಲವಿನ ಉಡುಗೊರೆಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. 

ಬಳಲಿ ಬೆಂಡಾಗಿದ್ದ ಮನಸ್ಸು ಮತ್ತು ದೇಹ ಈ ಚಾರಣ ಮುಗಿದಮೇಲೆ ಹೂವಿನ ಮೇಲೆ ಮಂಜಿನ ಹನಿ ಬಿದ್ದ ಹಾಗೆ ನಸು ನಗುತ್ತಾ ಬಂದದ್ದು ನನ್ನ ಮನಸ್ಸಿಗೆ ಮತ್ತು ದೇಹಕ್ಕೆ ತಂಪೆರೆದಂತೆ ಆಯಿತು. 

ಕುಮಾರಪರ್ವತವೆ ಎಂಥಹ ಶುಭ ಸಂದೇಶ ಮತ್ತು ಪಾಠ ನೀ ಕಳಿಸಿದ್ದು. ನಿನಗೆ ನನ್ನ ಕಡೆಯಿಂದ ಸಲಾಂ. ಮತ್ತೆ ಬರುವೆ ಏಳನೇ ಬಾರಿಗೆ. 

Monday, May 26, 2014

ವಿನಾಯ"ಕಂಗಳ"ದಲ್ಲಿ ಸಂಧ್ಯಾ !!!!(ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಮೂರು !!! )

"ಅಣ್ಣಾ ಅಣ್ಣಾ.. "

ಫೋನ್ ಕಿರುಚುತಿತ್ತು,..

"ಹಲೋ ಎಸ್ ಪಿ ಹೇಗಿದ್ದೀಯ.. .. ಏನೂ ಯೋಚನೆ ಬೇಡ.. ತಲೆ ಮೇಲೆ ತಲೆ ಬೀಳಲಿ ನಿನ್ನ ಅಮೃತ ಘಳಿಗೆಯಲ್ಲಿ ನಾನಿರುವೆ.. "
"ಅಣ್ಣಾ ಅದು ನನಗೆ ಗೊತ್ತು ಕನ್ನಡಿಯಿಲ್ಲದೆ ನನ್ನ ಮೊಗವನ್ನು ಹೇಗೆ ನೋಡಿಕೊಳ್ಳಲಿ.. ನೀವು ಬಂದೆ ಬರುತ್ತೀರಿ ಎಂದು ನಂಗೆ ಗೊತ್ತು.. ನನ್ನದೊಂದು ಪ್ರಾರ್ಥನೆ.. "

"ಒಯೆ ಯಾಕೋ ಹಾಗೆಲ್ಲ ಹೇಳ್ತೀಯ.. ನೀನು ನನ್ನ ಬಂಗಾರದ ಪುಟ್ಟಿ.. ಹೇಳು ಏನು ನಿನ್ನ ಪ್ರಾರ್ಥನೆ"

"ಮದುವೆ.. ನನ್ನ ಲೋಕದಲ್ಲಿ ನಾನಿರುವೆ.. ಫೋಟೋಗಳು ಬರುವ ತನಕ ಕಾಯುವ ತಾಳ್ಮೆ ಎನಗಿಲ್ಲ.. ಅದಕ್ಕೆ"

"ಓಕೆ ಸರಿ.. ಸಿಗೋಣ ಮದುವೆಯಲ್ಲಿ"

"ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು" ಆಹಾ... ಹೆಣ್ಣು ಮಗಳು ತಲೆ ಸ್ನಾನ ಮಾಡಿ ಕಪ್ಪು ಕೂದಲನ್ನು ಹರಡಿಕೊಂಡು ಕೂತಿರುವ ಹಾಗೆ ಇರುವ ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಕ್ಕನೆ ಒಂದು ಪೋಸ್ಟರ್ ತಡೆದು ನಿಲ್ಲಿಸಿತು .. 

ಹಾರಾಡುತ್ತಿರುವ ಮನಸ್ಸಿಗೆ ಆಹ್ವಾನ!!!


"ಅರೆ ಅರೆ ಹೌದು ಸರಿಯಾದ ನಕ್ಷೆ" ನನ್ನ ಕಾರು ನನಗೆ ಹೇಳಿತು.. 

ನಿಧಾನವಾಗಿ ಅದರ ತಲೆ ಸವರುತ್ತಾ ಆ ಕಾಡಿನ ಒಳಗೆ ನುಗ್ಗಿಸಿದೆ.. 

ಅಲ್ಲೊಂದು ಇಲ್ಲೊಂದು ಚಿನ್ಹೆಗಳು ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ತೋರಿಸುತ್ತಿತ್ತು.. 

ಆಹಾ.. ಬನ್ನಿ ಅಣ್ಣಾ ಕಾಯುತ್ತಾ ಇದ್ದೀವಿ!!!


ಸುಮಾರು ಐದು ನಿಮಿಷಗಳ ನಂತರ... 

ಕಾಯುತ್ತಿರುವ ಮಾರ್ಗ ಸೂಚಿ 

ಪ್ರಕೃತಿ ಮಡಿಲಲ್ಲಿ ಮುದ್ದು ಕಂದಮ್ಮ ನಸುನಗುತ್ತಿರುವಂತೆ ವೇದ ಘೋಷಗಳ ಮಧ್ಯೆ ನಮ್ಮ ಸಂಧ್ಯೆ ಅಂಗಳದಿ ಹಸೆಮನೆಯಲ್ಲಿ ನಾಚಿಕೆಯಿಂದ ಕೂತಿದ್ದಳು.. 

ನಮ್ಮನ್ನು ನೋಡಿದ ಸಂಭ್ರಮ ಆ ಪುಟ್ಟ ಕಣ್ಣುಗಳಲ್ಲಿ ಶರಧಿಯನ್ನೇ ತೋರಿಸಿತು.. 

ಅದನ್ನು ನೋಡಿದ ನಮಗೆಲ್ಲರಿಗೂ ಸುಮಾರು ೪೭೫ ಕಿಮಿ ಗಳ ಪ್ರಯಾಣದ ಆಯಾಸ ಉಫ಼್ಫ಼್ ಅಂಥಾ ಹಾರಿ ಹೋಯಿತು.. ಅಬ್ಬಾ ನಮ್ಮ ಸಂಧ್ಯಾ ಪುಟ್ಟಿಯ ಮೊಗದಲ್ಲಿ ಈ ನಗುವನ್ನು ತಂದ ನಮ್ಮ ಆಗಮನ ಆಹಾ ಸಾರ್ಥಕ ಎನ್ನಿಸಿತು,. 

ಮಂದ ಗತಿಯಲ್ಲಿ ಸಾಗುತ್ತಿದ್ದ ವೇದ ಘೋಷಗಳ ನಡುವೆ ಪರಿಣಯದ ಸುಮಧುರ ಘಳಿಗೆಗೆ ಸಾಕ್ಷಿಯಾಗಿದ್ದು ಬಂಧು ಮಿತ್ರರ ಸಂತಸ.. ಶುಭಕೋರುವ ಮಧುರ ಮನಗಳ ವಿನಿಮಯ.. 

ನಮಸ್ಕಾರ.. ನಾನು "ವಿನಾಯಕ" ಸಂಧ್ಯಾಳ ಭಾವ.. ಒಂದು ಸ್ಪುರಧ್ರೂಪಿ ಬಿಳಿ ಜುಬ್ಬಾ ಪೈಜಾಮದಲ್ಲಿ ಕಂಗೊಳಿಸುತ್ತಿದ್ದರು... ಫೇಸ್ಬುಕ್ನಲ್ಲಿ ನಿಮ್ಮನ್ನು ನೋಡಿದ್ದೇನೆ.. ನೀವೆಲ್ಲಾ ಬಂದದ್ದು ಬಹಳ ಕುಶಿಯಾಯಿತು ಎಂದರು.. ೬೦ ಹಲ್ಲುಗಳ ಪ್ರದರ್ಶನ ಆದಮೇಲೆ ಆಸರಿಕೆ ಆಯಿತೆ.. ತಂಪಾಗಿ ಕುಡಿಯಿರಿ ಅಂದರು.. 

ಸಂಧ್ಯಾ ಅಲ್ಲಿಯೇ ಕುಳಿತು ಕಣ್ಣಲ್ಲಿ ಏನೋ ಹೇಳಿದಳು.. ಮರುಕ್ಷಣ ಅವಳ ಇನ್ನೊಂದು ಪ್ರತಿರೂಪ ನಮ್ಮ ಮುಂದೆ ಹಾಜರ್.. 

ನಾನು ಸುಷ್ಮಾ.. ಸಂಧ್ಯಾಳ ಅಕ್ಕ.. ನೀವೆಲ್ಲ ಬಂದದ್ದು ಖುಷಿಯಾಯಿತು.. ತಂಪಾಗಿ ಕುಡಿಯಿರಿ. ಮತ್ತೆ ಬರುವೆ.. ಎಂದು ಮತ್ತೆ ಮಂಟಪದ ಒಳಗೆ ಓಡಿದರು 

ನಿಧಾನವಾಗಿ ಧರೆಗೆ ಇಳಿಯುತ್ತಿದ್ದೆವು.. 

ಮದುವೆ ಎಂದರೆ ಜಗಮಗ ಬೆಳಕು.. ಗದ್ದಲ.. ಗೌಜು.. ಎಲ್ಲಾ ಕಂಡಿದ್ದ ನಮಗೆ.. ಇಲ್ಲಿ ಪ್ರಕೃತಿ ಮಡಿಲಲ್ಲಿ ಎರಡು ಸುಮಧುರ ಮನೆಗಳ ಮನಗಳ ಒಂದಾಗುತ್ತಿದ್ದದ್ದು ನನಗೆ ಒಂದು ಸುಂದರ ಲೋಕಕ್ಕೆ ಹೋದ ಅನುಭವ.. 

ಕಲಾತ್ಮಕವಾಗಿ ಮೂಡಿದ್ದ ಕಲ್ಯಾಣ ಮಂಟಪ.. ಅದಕ್ಕೆ ತಕ್ಕ ಒಪ್ಪವಾದ ತೋರಣ.. ವಧು ವರನ ಹೆಸರು. ಅದಕ್ಕೆ ಮಾಡಿದ್ದ ಶೃಂಗಾರ.. ಒಂದಕ್ಕೊಂದು ಕಲಾತ್ಮಕ..

ಎರಡು ಸುಂದರ ಮನಗಳು - ಅಕ್ಕ ತಂಗಿ 

"ಅಣ್ಣಾ ಅಣ್ಣ.. " ಚಿರಪರಿಚಿತ ದನಿ ನನ್ನನ್ನು ಧರೆಗೆ ರಪ್ಪನೆ ಇಳಿಸಿತು..  

ಸಿದ್ಧವಾದ ಪುಟ್ಟಿ 

ಕಲಾಕುಸುರಿಯಲ್ಲಿ ಎತ್ತಿದ ಕೈ ನಮ್ಮ ಪುಟ್ಟಿ 


"ಆಯ್ ಪುಟ್ಟಾ ಹೇಗಿದ್ದೀಯ.. "

"ಅಣ್ಣಾ ನಾನು ಸೂಪರ್.. ಪುಟ್ಟಿ.. ಹೇಗಿದ್ದೀಯ.. ಅತ್ತಿಗೆ ಹೇಗಿದ್ದೀರಾ.. ಅರೆ ಭಾಗ್ಯ ಪುಟ್ಟಿ.. ಅರ್ಚನ ಪುಟ್ಟಿ.. ಅಣ್ಣಾ ನನಗೆ ಇದಕ್ಕಿಂತ ಆನಂದ ಇನ್ನೇನು ಬೇಕು.. ಥ್ಯಾಂಕ್ ಯು ಸೊ ಮುಚ್"

"ಅಣ್ಣಾ.. ಅರ್ಚನ ಪುಟ್ಟಿ ಹಾಕಿದ ಮೆಹಂದಿ ನೋಡಿ.. ನಾನೇ ಮಾಡಿಕೊಂಡ ಜಡೆಗೆ ಅಲಂಕಾರ ನೋಡಿ.. " ಅಷ್ಟರಲ್ಲಿ ಸಂಧ್ಯಾಳ ಅಕ್ಕ ಕೂಡ ಶ್ರೀಕಾಂತ್ ನೋಡಿ ಅವಳೇ ಮಾಡಿಕೊಂಡ ಜಡೆಗೆ ಅಲಂಕಾರ ಎಂದರು..


ಅರ್ಚನ ಪುಟ್ಟಿಯ ಚಮತ್ಕಾರ 

ಅರ್ಚನ ಪುಟ್ಟಿಯ ಚಮತ್ಕಾರ

ಅರ್ಚನ ಪುಟ್ಟಿಯ ಚಮತ್ಕಾರ

ಅರ್ಚನ ಪುಟ್ಟಿಯ ಚಮತ್ಕಾರ

ನನ್ನ ಮೊಬೈಲ್ ನಲ್ಲಿ "ಈ ಸಮಯ ಆನಂದಮಯ... " ಹಾಡು ಬರುತ್ತಿತ್ತು... 

ಯಾರೋ ಕೂಗಿದರು... ಸಂಧ್ಯಾ ಒಳಗೆ ಓಡಿದಳು.. 

ವಿನಾಯಕ್ ಬಂದು "ಗೊತ್ತಾಯಿತು ನೀವೆಲ್ಲ ಸಂಧ್ಯಾಳ ಸ್ನೇಹಿತರು.. ಬಂದದ್ದು ಬಹಳ ಖುಷಿಯಾಯಿತು.. ಸುಧಾರಿಸಿಕೊಳ್ಳಿ ಇದೆಲ್ಲ ಸಂಭ್ರಮ ಮುಗಿದಮೇಲೆ ಭೇಟಿ ಮಾಡುವೆ ಎಂದರು.."

ನಮಗೆ ಅರೆ ಮದುವೆ ಇಷ್ಟು ಸರಳ ಸುಂದರ ಸಂಭ್ರವನ್ನಾಗಿ ಮಾಡಬಹುದು ಎಂದು ಅರಿವಾದ ಸಮಯ ನಿಜಕ್ಕೂ ಆನಂದಮಯ ಎನ್ನಿಸಿತು.. 

ಹೋಮ ಹವನಾದಿಗಳು ಜರುಗುತಿದ್ದವು... ಅಷ್ಟರಲ್ಲಿ ಸ್ವಲ್ಪ ಅಡ್ಡಾಡಿ ಬರೋಣ ಅಂತ ಹೊರಗೆ ಬಂದೆ.. 

ನಮ್ಮೆಲ್ಲರ ಸುಂದರ ಮನದ ಸರದಾರರು ಬಾಲು ಸರ್ ಕಾರಿನಿಂದ ಇಳಿಯುತ್ತಿದ್ದರು.. ಇನ್ನು ಬಿಡಿ ನಗೆ ಹಬ್ಬ ಖಾತ್ರಿ ಎನ್ನಿಸಿತು.. 

ಲಾಜ ಹೋಮ ನಡೆಯುತ್ತಿತ್ತು.. ಅತ್ತ ಕಡೆ ನೆರೆದಿದ್ದವರಿಗೆ,.. ಈ ಸಂಭ್ರದಲ್ಲಿ ಪಾಲ್ಗೊಂಡವರ ಉದರವನ್ನು ತಣಿಸಲು ರುಚಿ ರುಚಿ ಭಕ್ಷ್ಯಗಳು ತಯಾರಾಗುತ್ತಿದ್ದವು.. 
ಲಾಜ ಹೋಮಕ್ಕೆ ಸಿದ್ಧವಾದರು 

ಅಂಗಳದಲ್ಲಿ ಒಲವಿನ ರಂಗವಲ್ಲಿ ಸದಾ ಇರಲಿ ಎಂಬ ಪ್ರಾರ್ಥನೆ ಸಲ್ಲಿಕೆ 

ತಮ್ಮನಿಂದ ಲಾಜ ಹೋಮಕ್ಕೆ

ದಂಪತಿಗಳಿಂದ ಒಲವಿಗಾಗಿ ಹೋಮಕ್ಕೆ ಲಾಜ 

ಲಾಜ ಹೋಮ ಕೊನೆ ಹಂತಕ್ಕೆ ಬರುತ್ತಿತ್ತು.. ಇತ್ತ ಕಡೆ ವಧುವನ್ನು ಬರಮಾಡಿಕೊಳ್ಳಲು ಮನೆಯಲ್ಲಿ ತಯಾರಿ ಸಿದ್ಧವಾಗಿತ್ತು.. 

ಮಂದ ಜ್ಯೋತಿಯ ಬೆಳಕಲ್ಲಿ ವಧುವನ್ನು ತಮ್ಮ ಮನೆಯ ಬೆಳಕಾಗುವ ಬೆಳಕನ್ನು ಬರಮಾಡಿಕೊಳ್ಳಲು ಹಾಡು ಹಸೆ ನಡೆಯುತ್ತಿದ್ದವು., 
ಬೀಗುತ್ತಿರುವ ಸಂಭ್ರಮದಲ್ಲಿ ಬೀಗರು 

ಸುಮಧುರ ಮನಗಳ ಒಡತಿಯರು 

ಹೊಟ್ಟೆಯಲ್ಲಿ ಪರಶಿವ ತಾಂಡವವಾಡುತ್ತಿದ್ದ... ಬಾಲೂ ಸರ್ ಎಂದು ಕಣ್ಣು ಹೊಡೆದೆ.. ನಡೆರಿ ಗುರುವೇ ಅಂದರು... 


ಚಕಾ ಚಕ್ ಹೊರಗೆ ಬಂದೆವು... ಮೊದಲನೇ ಪಂಕ್ತಿ ಭರ್ತಿಯಾಗಿತ್ತು.. ನಾವು  ನಮ್ಮ ದಂತ ಪಂಕ್ತಿಯನ್ನು ತೋರಿದೆವು.. ಚಿಕ್ಕ ಚಿಕ್ಕ ನಗೆ ಚಟಾಕಿ ಸಿಡಿಯುತ್ತಿದ್ದವು.. 

ಮಗಳಾದ ಭಾಗ್ಯ, ಸ್ನೇಹಿತೆಯಾದ ಶೀತಲ್, ಹೃದಯ ಭಾಗವಾದ ಸವಿತಾ, ತುಂಟ ತಂಗಿ ಅರ್ಚನ, ಮಾವನ ಮಗಳಾದರೂ ನನ್ನ ಮನೆ ಮಗಳಾದ ವಿದ್ಯಾ, ಗುರುಗಳಿಗೂ ಮಿಗಿಲಾದ ಬಾಲೂ ಸರ್ ಮತ್ತು ಅವರ ಶಿಷ್ಯ ನವೀನ ಎಲ್ಲರ ಜೊತೆಯಲ್ಲಿ ಕಳೆದ ಆ ಸಮಯ ನೆನಪಲ್ಲಿ ಉಳಿಯುವಂತದ್ದು.. 
ಪಾ ಸೂಪರ್ ಟೈಮ್ ಇದು!!!

ನಾ ಹೀಂಗ ನೋಡುವುದು ನಿಮ್ಮಾ!!!

ಊಟಕ್ಕೆ ಕೂತೆವು.. ನನಗೆ ಅಪರಿಚಿತ ಅನ್ನಿಸುವ ಕೆಲವು ಪದಾರ್ಥಗಳನ್ನು ಭಾಗ್ಯ ಮತ್ತು ಅರ್ಚನ ವಿವರಿಸುತ್ತಿದ್ದರು.. ಹೊಟ್ಟೆಯೊಳಗೆ ಸದ್ದಿಲ್ಲದೇ ಇಳಿದು ಉಶ್ ಎಂದು ನಿಟ್ಟುಸಿರು ಬಿಡುತ್ತಿದ್ದವು..  ಕೈ ತೊಳೆದು ಹೊರಗೆ ಬಂದಾಗ ನಮ್ಮ ಉದರ ಸಂತೃಪ್ತ ನಗೆ ಬೀರಿದರೆ.. ನಮ್ಮ ಮನ ಸಂತೃಪ್ತ ನಗೆ ಬೀರಲು ಈ ಕೆಳಗಿನ ಚಿತ್ರಕ್ಕೆ ಕಾಯುತ್ತಿತ್ತು.. 
ನವ ವಸಂತದ ಗಾಳಿಯ ಜೊತೆ ನಾವೆಲ್ಲರು 

ಒಂದು ಸುಂದರ ದಿನವನ್ನು ಇನ್ನಷ್ಟು ಸುಂದರಗೊಳಿಸಲು ಮಧುರ ಮಧುರವೀ ಮಂಜುಳಾ ಗಾನ ಎನ್ನಿಸುವಂತ ಮನಗಳು ಬೇಕಿತ್ತು... ಅವುಗಳೆಲ್ಲ ಒಂದಾಗಿ ಸಂಗಮವಾಗಿದ್ದ ದಿನ ಸಂಧ್ಯಾ ಪುಟ್ಟಿಯ ವಿವಾಹದ ಮೆಟ್ಟಿಲು ಹತ್ತಿದ ದಿನ.. 

ಸಂಧ್ಯಾ ಪುಟ್ಟಿ ವಿನಾಯಕ್ ಭಾವ.. ಗಮನ ಸೆಳೆಯುವ ಮನಗಳ ಸರದಾರರು ನೀವಿಬ್ಬರು.. ಇಡುವ ಹೆಜ್ಜೆಗಳೆಲ್ಲ ಹೂವಿನ 
ಹೆಜ್ಜೆಯಾಗಲಿ.. ಹೆಜ್ಜೆಯಲೆಲ್ಲಾ ಸವಿಯಾದ ಫಲಗಳು ಮೂಡಲಿ.. ನಿಮ್ಮ ಬಾಳು ಸುಂದರ ಅಂಗಳದಲ್ಲಿ ನಲಿಯುವ ನಗುವ ರಂಗವಲ್ಲಿಯಾಗಲಿ ಎಂಬ ಹಾರೈಕೆಯೊಂದಿಗೆ ಸಮಸ್ತ ಬ್ಲಾಗ್ ಬಳಗ ನಿಮ್ಮಗೆ ವೈವಾಹಿಕ ಜೀವನ ಅಂದುಕೊಂಡ ಕನಸ್ಸುಗಳನ್ನು ನನಸ್ಸು ಮಾಡಲಿ ಎಂದು ಉಲಿಯುತ್ತೆವೆ!!!!

ವಿವಾಹ ಜೀವನಕ್ಕೆ ಶುಭಾಶಯಗಳು... !!!

ಅಣ್ಣ ನನಗೆ.. ನಿಮ್ಮ ಸಿರ್ಸಿ ಪಯಣದ ಮುಂದುವರೆದ ಭಾಗ ಬೇಕು ಬೇಗ ಹೇಳಿ.. ನೋಡಿ ನಾ ಮದುವೆಯ ಸಂಭ್ರಮದಲ್ಲಿ ಮಿಂದು ಬೆಂಗಳೂರಿಗೆ ಬರುವಷ್ಟರಲ್ಲಿ ಈ ಸರಣಿ ಬರಬೇಕು ಆಯ್ತಾ... ನನ್ನ ಒತ್ತಾಯಕ್ಕೆ ಮಣಿದು ಸಿರ್ಸಿ ಪಯಣದ ಈ ಭಾಗವನ್ನು ಕೊಟ್ಟಿದ್ದೀರ.. ಇದಕ್ಕಾಗಿ ಸಮಸ್ತ ಬ್ಲಾಗ್ ಬಳಗಕ್ಕೆ ನನ್ನ ಧನ್ಯವಾದಗಳು.. !!!
ಇಡಿ ಸಮಸ್ತ ಬ್ಲಾಗ್ ಕುಟುಂಬಕ್ಕೆ ನಮ್ಮ ಧನ್ಯವಾದಗಳು 

ಇಂತಿ ನಿಮ್ಮ ವಿನಾಯ"ಕಂಗಳ"ದಲ್ಲಿ ಸಂಧ್ಯಾ 

Thursday, April 17, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಎರಡು !!!

ಮುಂದುವರೆದ ಚಡಪಡಿಕೆ ಚಡಪಡಿಕೆ.................!


ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲೆದಾಗಿತ್ತು.. ಕುಲಾವಿ ಈ 

ಕೊಂಡಿಯಲ್ಲಿ ಸಿಗುತ್ತಿತ್ತು.. 

ಕುಲಾವಿ ಹಾಕಿಕೊಂಡ ಕೊಂಡ ಕಂದ ಮೊದಲ ಹೆಜ್ಜೆ ಇಟ್ಟಿದ್ದು ಈ ಪಾದದ ಅಳತೆಯಲ್ಲಿ ಸಿಗುತ್ತಿತ್ತು

ಈಗ ಕಂದ ನಡೆದಾಡುವ ಸಮಯ.. ಮತ್ತೆ ಚಡಪಡಿಕೆ ಆರಂಭವಾಗಿತ್ತು.. ಅದ್ಭುತವಾಗಿ ಶುರುವಾದ ಪಯಣ ಒಂದು ಹಂತಕ್ಕೆ ಬಂದು ಸುಧಾರಿಸಿಕೊಳ್ಳುತ್ತಿತ್ತು.. ಮುಂದಿನ ದಿನದ ಬಗ್ಗೆ ದಾರದಲ್ಲಿ ನೇಯ್ಗೆ ಕೆಲಸ ಆರಂಭವಾಗಿತ್ತು..

"ಬೇಡ ಕಣೋ.. ಪಾಪ ಅಣ್ಣ.. ದಿನವೆಲ್ಲ ಕಾರು ಡ್ರೈವ್ ಮಾಡಿದ್ದಾರೆ.. ಏಳಿಸಬೇಡ.. ಮಲಗಿಕೊಳ್ಳಲಿ" ಎಂದಿದ್ದರಂತೆ ಅಮ್ಮ..

 ಕಣ್ಣು ಬಿಟ್ಟೆ.. ಸೂರ್ಯ "ಹಲೋ ಗುರು" ಎಂದು ಹೇಳುತ್ತಾ ಲ್ಯಾರಿ ಅಜ್ಜನ ಕೋಣೆಯ ಕಿಟಕಿಯಿಂದ ಒಳ ನುಸುಳುತಿದ್ದ..

ಸಿಕ್ಕ ಜಾಗದಲ್ಲಿ ತೂರಿಕೊಂಡು ನನ್ನನ್ನು ಮೃದುವಾಗಿ ಎಬ್ಬಿಸಿದ 
ಸೂರ್ಯ ಭಗವಾನ್!!!

"ಗುಡ್ ಮಾರ್ನಿಂಗ್ ಅಣ್ಣಾ" ಮಗಳ ಕೋಗಿಲೆ ಧ್ವನಿ.. ಮನಸನ್ನು ಅರಳಿಸಿತು...ತಂಗಿಯಾಗಿ ಬಂದು ಮಗಳಾಗಿದ್ದವಳ ಮಂಜುಳ ಧ್ವನಿ ಅದು..  ಪಕ್ಕದಲ್ಲಿ ನೋಡಿದೆ ಸ್ನೇಹಿತಳಂತ ಮಗಳು ಇನ್ನು ಸಕ್ಕರೆ ನಿದ್ದೆಯಲ್ಲಿದ್ದರೆ.. ಮನ ಮೆಚ್ಚಿದ ಮಡದಿ ಸಿಹಿ ನಿದ್ದೆಯ ಇಳಿಜಾರಿನಲ್ಲಿ ಜಾರಾಡುತ್ತಿದ್ದಳು....!

"ಅಣ್ಣಾ ಕಾಫೀ ಕುಡಿಯಿರಿ.. ಹಾಗೆ ಒಂದು ಪುಟ್ಟದಾಗಿ ಸುತ್ತಾಡಿ ಬರೋಣ.."

ಐದೇ ನಿಮಿಷ.. ಇಬ್ಬರು ಮನೆಯಿಂದ ಹೊರಗೆ.. ಆ ತಂಗಾಳಿಯಲ್ಲಿ.. ನಡೆಯುತ್ತಾ ಸಾಗಿದ್ದೆವು.. ಮೆಲ್ಲಗೆ ನನ್ನನ್ನೇ ಚಿವುಟಿಕೊಂಡೆ.. 

"ಅರೆ ಇದು ಕನಸೋ ನನಸೋ.. ಇಲ್ಲಿ ಬರಲು ಸಾಧ್ಯವೇ ಇಲ್ಲ.. ಕಾರಣವೇ ಇಲ್ಲಾ..  
ಏನಪ್ಪಾ ಅಯ್ಯೋ ತಪ್ಪು ತಪ್ಪು !!!!

ಏನಮ್ಮ ನಿನ್ನ ಲೀಲೆ ಶಾರದೇ.. ನಿನ್ನ ಲೋಕದ ಜೀವಿಗಳಲ್ಲಿ ಈ ಮಟ್ಟಿನ ಪ್ರೀತಿ ವಿಶ್ವಾಸ.. ನಿನ್ನ ಗಂಡನ ಲೋಕದಲ್ಲಿದ್ದರೆ.. ಆಹಾ. !"

ಬೆಳಗಿನ ತಂಗಾಳಿ... ಸೂರ್ಯ ಬೀರುತ್ತಿದ್ದ ಬಿಸಿಲು ಕೋಲು.. ಹಿತ ಮಿತ ಶಾಖ.. ಸುತ್ತ ಮುತ್ತಲು ಹಸಿರು.. ಜೊತೆಯಲ್ಲಿ ಪ್ರೀತಿ ಪಾತ್ರಳಾದ ಮಗಳು ತಾನು ಅಕ್ಷರದ ಮೆಟ್ಟಿಲನ್ನು ಹತ್ತಲು ಶುರುಮಾಡಿದ್ದ ಶಾಲಾ ದೇಗುಲದ ಬಳಿ ಕರೆದೊಯ್ದಿದ್ದಳು..
ಅಣ್ಣ.. ಇಲ್ಲೇ ಸ್ವಲ್ಪ ದೂರದಲ್ಲಿ ನನ್ನನ್ನು ರೂಪಿಸಿದ ದೇಗುಲ ಇರುವುದು!!!

ಅಣ್ಣ ನಾ ಇಲ್ಲೇ ನನ್ನ ವಿಧ್ಯಾಭ್ಯಾಸ ಶುರು ಮಾಡಿದ್ದು.. ಇದನ್ನು ಹೇಳುವಾಗ ಅವಳ ಕಣ್ಣಲ್ಲಿ ಹೆಮ್ಮೆಯ ಸಾಧನೆ ಕಂಡರೆ.. ಶಾಲಾ ದೇಗುಲದ ಆವರಣದಲ್ಲಿದ್ದ ಐದು ಸಿಂಹಗಳು..ಹೌದು ಹೌದು ಎಂದವು!

ಐದು ಸಿಂಹಗಳು ಒಂದೇ ಚೌಕಟ್ಟಿನಲ್ಲಿ.. 
ನಾವಿಲ್ಲಿ ಇರುವಾಗ ಭಾವನೆ ತುಂಬಿರುವ ಅಕ್ಷರಗಳ ತೇರುಗಳೇ ಸಿಂಹಗಳಾಗಿ ಹೊರ ಹೋಗುವುದು ಎನ್ನುವಂತೆ ಎದೆ ಸೆಟೆದು ಹೇಳುತ್ತಿದ್ದವು..

ತನ್ನ ಪ್ರೀತಿಯ ವಿದ್ಯಾರ್ಥಿಗೆ ಸ್ವಾಗತ ಕೋರಲು ಸಜ್ಜಾಗಿ ನಿಂತ 
ಶಾಲಾ ದೇಗುಲ. 

ಸುಂದರ ಭಾವದ ತೇರನ್ನು ಏರಿಸುವ ಬರಹಗಾರ್ತಿಗೆ ಅಡಿಪಾಯ ಹಾಕಿಕೊಟ್ಟ ಶಾಲಾ ದೇಗುಲಕ್ಕೆ ಮನದಲ್ಲಿ ನಮಿಸಿದೆ. ಮೆಲ್ಲಗೆ ಕಿರುಗಣ್ಣಲ್ಲಿ ಮಗಳನ್ನು ನೋಡಿದೆ.. "ಓಹ್ ನೋ" ಎಂದು ನಕ್ಕಳು.. ಇಬ್ಬರಿಗೂ ಅರ್ಥವಾಯಿತು.. ಇಬ್ಬರೂ ಶಾಲೆಗೇ ನಮಿಸಿ ಮನೆಗೆ ಬಂದೆವು..
ಶಾಲಾ ಫಲಕ.. !!!

ಅಣ್ಣಾ ನಾ ಓದಿದ ಶಾಲೆ.. !

ಒಂದು ಸುಂದರ ದಿನದ ಮುನ್ನುಡಿಗೆ  ಬೆಳಗಿನ ಒಂದು ಹಿತಮಿತ ನಡಿಗೆ ಕೊಟ್ಟ ಆರಂಭ ಸಕತ್ ಇತ್ತು.. ಪ್ರಾತಃಕರ್ಮಗಳನ್ನು ಮುಗಿಸಿ.. ತಿಂಡಿ ತಿಂದು.. ಮತ್ತೆ ಕಾರಲ್ಲಿ ಕೂತಾಗ ಘಂಟೆ ಎಂಟುವರೆ ಒಂಭತ್ತು ಆಗಿತ್ತು..

ಆ ಒಂದು ಪುಟ್ಟ ಪುಟ್ಟ ಸಮಯದಲ್ಲಿ ಮಾಯ್ನೋರ ಮನೆಯ ಯಜಮಾನರಾದ ಅಜ್ಜ, ಅವರ ಸಾರಥಿಯಾದ ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ, ಅಪ್ಪ ಅಮ್ಮ.. ಎಲ್ಲರ ಕಿರು ಪರಿಚಯವಾಗಿತ್ತು.. ಎಲ್ಲರ ಕುತೂಹಲದ ಕೇಂದ್ರ ಬಿಂಧು ನಾನಾಗಿದ್ದೆ ಎನ್ನುವುದು ನನಗೆ ಬೆಂಗಳೂರಿಗೆ ಬಂದ  ಮೇಲೆ ತಿಳಿಯಿತು.. !!!

ವಿಶಾಸ ಪ್ರೀತಿ ಮಮತೆಯ ಶರಧಿ.. ಮಾಯ್ನೋರ್ ಮನೆ 

ಕಾರು ಶಿರಸಿ ಕಡೆ ಹರಿಯುತಿತ್ತು.. ದಾರಿಯಲ್ಲಿ ಸಂದೇಶಗಳ ಮೇಲೆ ಸಂದೇಶ.

"ಪ್ಲೀಸ್ ಹೇಳು.. ಯಾತಕ್ಕೆ ಬರ್ತಾ ಇದ್ದೀಯ.. ಯಾರಿದ್ದಾರೆ.. ಎಷ್ಟು ಹೊತ್ತಿಗೆ.. ಐದು ನಿಮಿಷ ಹತ್ತು ನಿಮಿಷ ಇದಕ್ಕೆ ಬೆಲೆಯಿಲ್ಲವೇ.. ಬರದೆ ಇದ್ದರೆ ಹಗ್ಗ.. ಬಿಳಿ ಸೀರೆ.. " ಹೀಗೆ ಸಾಗುತ್ತಲೇ ಇತ್ತು.. ಮಗಳ ಮೊಬೈಲ್ ನಲ್ಲಿ.. ಎಲ್ಲರೂ ನಗುತ್ತಲೇ ಇದ್ದೆವು.. ಅಷ್ಟೇ!

ಸೀದಾ ಮತ್ತೊಂದು ಅಜ್ಜನ ಮನೆಗೆ ಬಂದೆವು.. ಮನಸ್ಸಲ್ಲಿ ಇರುವ ಪ್ರೀತಿ ಭೂಮಿಯ ಆಳಕ್ಕಿಂಥ ಕೆಳಗೆ ಇಳಿಯುವ ಸುಂದರ ಸಂದರ್ಭ.. ಲಗುಬಗೆಯಿಂದ ಕೊಟ್ಟ ಕಾಫೀ.. ದೇಹವನ್ನು ಮತ್ತೆ ಚುರುಕುಗೊಳಿಸಿತು.. ಎಲ್ಲರಿಗೂ ಸಂಜೆ ಬರುತ್ತೇವೆ ಎಂದು ಹೇಳಿ.. ನಾವು ಮತ್ತೆ ಹೊರಟೆವು..

ಅಜ್ಜನ ಮನೆಯ ಮೊದಲ ಮನೆಯಾಗಿ ಎಂದಳಾ ಭಾಗ್ಯ!!!

ಅಷ್ಟರಲ್ಲಿಯೇ.. "ಹೇ ನೀನು ಬರ್ತೀಯೋ ಇಲ್ಲಾ.. ನಾ"

"ಇಲ್ಲ ಬರ್ತಾ ಇದ್ದೀನಿ.. ಐದು ಹತ್ತು ನಿಮಿಷ.. ಸಿದ್ಧವಾಗಿರು ಪ್ಲೀಸ್"

"ನೀ ಬರೋಲ್ಲ.. ನಾ ಕಾಲೇಜಿಗೆ ಹೋಗುತ್ತೇನೆ.. "

"ಇಲ್ಲ ಪ್ಲೀಸ್.. ಪ್ಲೀಸ್.. "

ದೇವರಿಗೆ "ಅರ್ಚ"ನೆ ಪೂಜೆ ಮಂಗಳಾರತಿ ಏನೇ ಕೊಡಬಹುದು ಅಥವಾ ಮಾಡಬಹುದು ಆದರೆ..  ಈ ಚಿಕ್ಕ ಚಿಕ್ಕ ಪುಟ್ಟಿಯರನ್ನು ಸಂಭಾಳಿಸುವ ಕೆಲಸ.. ರಾಮರಾಮ!

ಸಿರ್ಸಿ ಹೃದಯ ಭಾಗದ ಹತ್ತಿರ.. ಒಂದು ತಿರುವಿನಲ್ಲಿ ಕಾರು ನಿಂತಿತು..

"ಓಹ್ ಓಹ್ ಇವರ.. ಓಕೆ ಓಕೆ.. ಕೋಗಿಲೆ ಧ್ವನಿ "ಕ್ರಶ್" ಮಾಡುತ್ತಾ ಹರಿಯಿತು.. ತಿರುಗಿ ನೋಡಿದೆ.. ಹಲ್ಲು ಬಿಟ್ಟೆ..

ಹಾಯ್ ಅತ್ತಿಗೆ.. ಹಾಯ್ ಶೀತಲ್.. "

ಹಾಯ್ ಒಯ್ ಗಳು ವಿನಿಮಯವಾದವು..

"ಏನ್ರಿ ಹೇಗಿದ್ದೀರ.. " 

ನಾ ಕೇಳಿದ ಗಂಭೀರ ಪ್ರಶ್ನೆಗೆ ಅಷ್ಟೇ ಗಂಭೀರವಾಗಿ "ನಾ ಚೆನ್ನಾಗಿದ್ದೀನಿ ಶ್ರೀಕಾಂತಣ್ಣ"

(ಪುಣ್ಯ ಮಗಳಿಗೆ.. ಅರ್ಚನ ಪುಟ್ಟಿಯಿಂದ ಅರ್ಚನೆಯಾಗಲಿಲ್ಲ.. ಇವರ ಬಗ್ಗೆನಾ ಇಷ್ಟೊಂದು ಬಿಲ್ಡ್ ಅಪ್ ಕೊಟ್ಟಿದ್ದು ಅಂತ)

ಮುಂದಿನ ಹತ್ತು ಘಂಟೆಗಳು ಮನಸಲ್ಲಿ ಒಂದು ಸುಂದರ ನೆನಪಾಗಿ ಅಚ್ಚು ಮೂಡಿಸಿತ್ತು..

ಸ್ನೇಹಿತೆಯಾದ ಶೀತಲ್.. ಮಗಳಾದ ಭಾಗ್ಯ ಪುಟ್ಟಿ.. ಮನದನ್ನೆಯಾಗಿ  ನಗುತ್ತಲೇ ಇರುವ  ಸವಿತಾ.. ನೋಡಿದ ತಕ್ಷಣ ತಂಗಿ ಅಂದ್ರೆ ಹೀಗೆ ಇರಬೇಕು ಎನ್ನಿಸುವ ಅರ್ಚನ ಪುಟ್ಟಿ.. ನನ್ನ ಪ್ರವಾಸಕ್ಕೆ ಯಾವಾಗಲೂ ತನ್ನ ಟೈರ್ ಗಳನ್ನೂ ತಟ್ಟಿಕೊಂಡು ಸಿದ್ಧವಾಗಿರುವ ನನ್ನ ರಿಟ್ಜ್ ಕಾರು.. ಶ್ರೀ ನಿನ್ನ ಎಲ್ಲ ನೆನಪುಗಳು  ನನ್ನ ಸಂಗಡ ಎನ್ನುವ ನನ್ನ ಕ್ಯಾಮೆರ.. ಇದಕ್ಕಿಂತ ಇನ್ನೇನು ಬೇಕು ಒಂದು ಸುಂದರ ಪ್ರವಾಸ ರಸಮಯವಾಗಲು..!

ಎಲ್ಲೆಲ್ಲಿಗೆ ಹೋಗೋದು.. ಕೆಲವರು ಅಲ್ಲೇನು ಇದೆ ಮಣ್ಣು ಅಂದರೆ.. ಇನ್ನು ಕೆಲವರು ಮಣ್ಣಾದರು ಸರಿ ಅಲ್ಲಿ ಕ್ರಶ್ ಇರುತ್ತದೆ ಎಂದು ಹೇಳುತ್ತಿದ್ದರು .. ಅಣ್ಣಾ ನೀವೆಲ್ಲಿಗೆ ಕರೆದುಕೊಂಡು ಹೋದರು ಸರಿ.. ನಾ ನಿಮ್ಮ ಜೊತೆ ಎನ್ನುತ್ತಾ ಎಲ್ಲರೂ ನನ್ನ ಕೊರಳಿಗೆ ಜೋತು ಬಿದ್ದರು...

ಕೊಸರು: ಶಾಲಾ ದೇಗುಲದ ಮುಂದೆ ಕಂಡ ಫಲಕ.. ನನ್ನ ಮನಸ್ಸೆಳೆಯಿತು.. ಅಕ್ಷರಗಳಲ್ಲೇ ಮತ್ತು ಬರಿಸುವ ಸುಮಧುರ ಭಾವಗಳ ಬರಹಗಳ ಒಡತಿಯನ್ನೇ ಸರಸ್ವತಿ ಲೋಕಕ್ಕೆ ಕೊಟ್ಟಾ ಈ ಶಾಲಾ ದೇಗುಲದ ಮುಂದೇ ಬೇರೆ ನಶೆ ಬರಿಸುವ ಪದಾರ್ಥಗಳನ್ನು ನಿಷೇದಿಸಿರುವುದು ಸಮಂಜಸ ಎನ್ನಿಸಿತು!!!!

ಬರಹಗಳ ನಶೆಯ ಮುಂದೇ ಈ ನಶಾ ಪದಾರ್ಥಗಳು ತೃಣ ಸಮಾನ!!!

ಮತ್ತೆ ಚಡಪಡಿಕೆ ಶುರುವಾಯಿತು.. !!!!

Monday, March 31, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಒಂದು - !!!

ಚಡಪಡಿಕೆ ಚಡಪಡಿಕೆ.................................................!



ನನಗೆ ಹುಚ್ಚಿತ್ತು.. ಪ್ರವಾಸಕ್ಕೆ ಹೋಗುವ ಮೊದಲೇ.. ಆ ಪ್ರವಾಸದ ಬಗ್ಗೆ ಬರೆದು ನಂತರ ಬರೆದ ಹಾಗೆಯೇ ಪ್ರವಾಸವನ್ನು ಅನುಭವಿಸಬೇಕು ಎಂದು.. ಈ ಹುಚ್ಚಿನ ಮೊದಲ ಮಜಲು ಈ ಲೇಖನ ಈ ಕೊಂಡಿಯಲ್ಲಿದೆ.. ಕೂಸು ಹುಟ್ಟುವ ಮುಂಚೆಯೇ ಕುಲಾವಿ!

ಸೂರ್ಯಂಗೇ ಟಾರ್ಚ್...  ಪ್ರವಾಸಕ್ಕೆ ಟಾರ್ಚ್!!!

ರವಿಯೂ ಕಾಯುತ್ತಿದ್ದ ಈ ಪ್ರವಾಸಕ್ಕೆ ಬೆಳಕಾಗಲು!!!
ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..


ಅಪ್ಪ ಭಾಗ್ಯ ಅಕ್ಕನನ್ನು ನಾನೆ ಕರೆದು ಕೊಂಡು ಬರುತ್ತೇನೆ ಎಂದಳು ನನ್ನ ಸ್ನೇಹಿತೆ ಶೀತಲ್!! 


ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ" 



"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"



"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"



"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "



ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..


ರವಿ ನಮ್ಮ ಪಯಣಕ್ಕೆ ಶುಭಕೋರಿ ತನ್ನ ಗೂಡನ್ನು ಸೇರಲು ಹೊರಟ ಕ್ಷಣ!


ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..


ನಾ ಹಲ್ಲು ಬಿಡುವುದನ್ನು ಬಿಟ್ಟು ಬೇರೇನೂ ತೋಚಲಿಲ್ಲ ಕಾರಣ.. ನನಗೂ ಅದೇ ಪ್ರಶ್ನೆಗಳು ಕಾಡುತ್ತಿದ್ದವು. 

ನಿಮ್ಮ ಪ್ರವಾಸಕ್ಕೆ ನಾನು ಬರುತ್ತೇನೆ ಎಂದ ಶ್ವಾನ ಮಹಾರಾಜ!!! 

"ಶ್ರೀ ಇಷ್ಟು ದೂರ ಬಂದಿದ್ದೇವೆ.. ದೊಡ್ಡಮ್ಮನ ಮನೆಗೆ ಹೋಗಿ ಬರೋಣ" ಸವಿ ಉವಾಚ.. 

ಶೀತಲ್ ಕುಣಿಯುತ್ತಿದ್ದಳು..  ಮೆಲ್ಲಗೆ ಮಗಳ (ಭಾಗ್ಯ) ಕಡೆ ನೋಡಿದೆ ..

"ಅಣ್ಣಾ ನೀವು ಎಲ್ಲಿಗೆ ಕರೆದುಕೊಂಡು ಹೋದರು ನಾ ಬರುವೆ ನಿಮ್ಮೊಡನೆ.. "ಭಾಗ್ಯ ಉವಾಚ!

ಸರಿ ಶಿವಮೊಗ್ಗದ ಕೋಟೆ ಆಂಜನೇಯನ ಬೀದಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದೆವು.. ಅಲ್ಲಿ ನದಿಯಲ್ಲಿರುವ ನೀರು ಶರಧಿಗೆ ಸೇರುವಂತೆ.. ಪ್ರೀತಿಯ ಸಾಗರವನ್ನೇ ಹರಿಸಿ ಬಿಟ್ಟರು.. ಕೇವಲ ಒಂದು ಹತ್ತು ಹದಿನೈದು ನಿಮಿಷದ ಭೇಟಿ.. ಎರಡು ಘಂಟೆಗಳ ಭೇಟಿಗೆ ತಿರುಗಿತು.... 

ಹೊಟ್ಟೆ ತುಂಬಾ ಊಟ ಬಾಯಿ ತುಂಬಾ ಮಾತು.. ಸಂಕೋಚದ ಮುದ್ದೆ ಎನಿಸಿಕೊಂಡಿದ್ದ ಭಾಗ್ಯ.. ಉತ್ಸಾಹದ ಚಿಲುಮೆಯಾಗಿದ್ದಳು.. 

ಸುಮಾರು ಹೊತ್ತು ಇದ್ದು.. ಮಾತು ಮಾತು ಇನ್ನಷ್ಟು ಮಾತಿನ ನಂತರ ದೊಡ್ಡಮ್ಮನ ಆಶೀರ್ವಾದ ಪಡೆದು.. ಅಣ್ಣ ತಮ್ಮ ಎನ್ನುವ ಮಾತೆ ಇಲ್ಲದೆ ಗೆಳೆಯರ ತರಹ ಮಾತಾಡುತ್ತಿದ್ದ ಸುಬ್ಬರಾಮು ದಂಪತಿಗಳಿಂದ ಅಪ್ಪಣೆ ಪಡೆದು ಹೊರಟೆವು... !

ಮೆಲ್ಲನೆ ಒರೆಗಣ್ಣಲ್ಲಿ ನೋಡಿ "ಅಣ್ಣಾ ಗಿರೀಶ್ ಮತ್ತು ಅವರ ಸ್ನೇಹಿತ ಶಿವಮೊಗ್ಗದಲ್ಲಿ ಇದ್ದಾರಂತೆ" ಭೇಟಿ ಮಾಡೋಣ.. 

ಕಣ್ಣು ಮಿಟುಕಿಸಿದೆ... ನನ್ನ ಪ್ರೀತಿಯ ಕಾರು ಶಿವಮೊಗ್ಗದ ವಾಹನ ನಿಲ್ದಾಣದ ಮುಂದೆ ಹಾಜಿರ್.. ಗಿರೀಶ್ ಮತ್ತು ಅವರ ಸ್ನೇಹಿತರಾದ ಪೂರ್ಣೇಶ್ ನಿಂತಿದ್ದರು... ಮಾತು ಇನ್ನಷ್ಟು ಮಾತು.. ಭಾಗ್ಯ ಪುಟ್ಟಿಯ ಸಂತಸದ ನಗು.. ಅರೆ ಘಳಿಗೆ ಅರೆ ಘಳಿಗೆಯಲ್ಲೂ ಬದಲಾಗುತ್ತಿದ್ದ ನಮ್ಮ ಪಯಣದ ಪಟ್ಟಿ.. 

ಸಿದ್ದಾಪುರದಿಂದ ಕರೆ ಬರುತ್ತಲೇ ಇತ್ತು.. ಎಷ್ಟು ಹೊತ್ತಿಗೆ ಬರ್ತೀರಿ.. ಆ ಪ್ರಶ್ನೆಗೆ ಯಾರಲ್ಲೂ ಉತ್ತರವಿರದ ಪ್ರಶ್ನೆಯಾಗಿತ್ತು.. :-)

ಗಿರೀಶ್ ಮತ್ತು ಸ್ನೇಹಿತರಿಗೆ ಎಲ್ಲಾ ಆಮಿಷ ತೋರಿದೆವು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಲು.. ಆದ್ರೆ ಅವರು (AAP) ಪೊರಕೆ ಗುರುತಿನ ಮಾಲೀಕನಂತೆ.. ಗಲಿಬಿಲಿ ನಿರ್ಧಾರವಿರಲಿಲ್ಲ.. ಇಲ್ಲ ಸರ್ ನಮ್ಮದು ಆಗಲೇ ಪೂರ್ವ ನಿಯೋಜಿತ ಕಾರ್ಯಕ್ರಮ.. ದಯಮಾಡಿ ಕ್ಷಮಿಸಿ ಮತ್ತೊಮ್ಮೆ ಬರುತ್ತೇವೆ.. ಎಂದರು. 

ಸಾಗರದ ನಿರೀಕ್ಷಣ ಮಂದಿರದತ್ತ ಕಾರು ಓಡಿತು.. ನಗುಮೊಗದ ಅಧ್ಯಾಪಕರು ಸರಿ ರಾತ್ರಿ ಹನ್ನೆರಡರ ಆಸುಪಾಸಿನಲ್ಲಿಯೂ ನಸು ನಗುತ್ತ ನಮ್ಮನ್ನು ಮಾತಾಡಿಸಿ ಬನ್ನಿ ಊಟ ಮಾಡುವಿರಂತೆ.. ಇಲ್ಲಾ ಕಡೆ ಪಕ್ಷ ಕಾಫಿಯಾದರೂ ಕುಡಿಯಲೇ ಬೇಕು ಎಂದು ಒತ್ತಾಯ ಮಾಡಿದರು. ಆಗದು ಎಂದು ಹೇಳಲು ಆಗಲಿಲ್ಲ.. 

ಏನೀ ಸ್ನೇಹ ಸಂಬಂಧ. ಎಲ್ಲಿಯದೂ ಈ ಅನುಬಂಧ.. ಸರಿ ರಾತ್ರಿಯಲ್ಲಿ ಬ್ಲಾಗ್ಲೋಕದ ಜೊತೆಯಲ್ಲಿ!!! 

ಭಾಗ್ಯ ನಗುತ್ತಲೇ ಇದ್ದಳು.. "ಅಣ್ಣಾ ನಿಮ್ಮ ಹೃದಯ ನಿಮ್ಮ ಕಾರಿಗಿಂತ ದೊಡ್ಡದು....:) "

ಮಧ್ಯರಾತ್ರಿಯಲ್ಲಿ ಪರಿಚಯವೇ ಇಲ್ಲದ ಒಂದು ಕುಟುಂಬದ ಭೇಟಿಗೆ ಮನ ಕಾಯುತ್ತಿತ್ತು. ಮುದ್ದಾದ ಮಗುವಿನ.. ತಾಳ್ಮೆಯ ಮಡದಿ ಕೂಡಿದ ಚಂದದ ಸಂಸಾರ ಅವರದ್ದು.. ಬನ್ನಿ ಬನ್ನಿ ಸ್ವಲ್ಪ ಹೊತ್ತು ಮಾತಾಡುತ್ತಾ ಕೂತಿರಿ.. ಬಿಸಿ ಬಿಸಿ ಅಡಿಗೆ ಮಾಡಿಬಿಡುತ್ತೇನೆ. ಆ ಮಲೆನಾಡಿನ ಹೆಬ್ಬಾಗಿಲಲ್ಲಿ ಸರಿ ರಾತ್ರಿಯ ತಣ್ಣನೆ ಗಾಳಿಯಲ್ಲೂ ಮೈ ಸಣ್ಣಗೆ ಬೆವರಿತು. 

ಬೇಡ ಸರ್.. ಕಾಫಿ ಮಾತ್ರ ಕೊಡಿ.. ಭಾಗ್ಯ ಮತ್ತೆ ಮತ್ತೆ ನಗುತ್ತಿದ್ದಳು.. "ಅಣ್ಣ ನಿಮಗೆ ಕಾಫಿ ಸಿಕ್ಕರೆ.. ಆ ದೇವರನ್ನು ಕೂಡ ಒಮ್ಮೆ.... ಹಹಹ ಹಹಹ" ಅವಳ ನಗು ನಿಂತಿರಲಿಲ್ಲ. 

ಕಾಫಿ ಬಂತು.. ಸರ ಸರ ಕುಡಿದು.. ದೇವರಲ್ಲಿ ಪ್ರಾರ್ಥಿಸಿದೆವು. ದೇವರೇ ಇನ್ನು ನಮ್ಮ ಮುಂದಿನ ನಿಲ್ದಾಣ ಸಿದ್ದಾಪುರದ ಮಾಯ್ನೋರಮನೆ ಆಗಿರಲಪ್ಪ. ಕಾರಣ ಭಾಗ್ಯ ಪುಟ್ಟಿಯ ಮೊಬೈಲ್ ಅಳುತ್ತಲೇ ಇತ್ತು.. ಪಾಪ ಅದನ್ನು ಎತ್ತಿ ಕೊಂಡು ಎತ್ತಿ ಕೊಂಡು ಸಮಾಧಾನ ಮಾಡಿ ಮಾಡಿ.... !

"ಅಣ್ಣಾ ಮಾತಾಡುತ್ತಿರಿ.. "

ಸರಿ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳು.. ಎಲ್ಲವೂ ನನ್ನ ಬಾಯಿಂದ ಅನಾವರಣಗೊಳ್ಳುತ್ತಿದ್ದವು!

ಕಾರು ಸಿದ್ದಾಪುರ ದಾಟಿತು.. ಮಾಯ್ನೋರಮನೆಯ ಮುಂದೆ ಬಂದು ನಿಂತಿತು..!!! 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಓಡಿಸಿದ್ದ ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು..!

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಆದರೆ ಮರುದಿನ ಬೆಳಿಗ್ಗೆ.. (ಮರುದಿನ ಬೆಳಿಗ್ಗೆ ವಾಟ್ ನಾನ್ಸೆನ್ಸ್.. ನಾವು ತಲುಪಿದ್ದು ಬೆಳಗಿನ ಜಾವ ಎರಡು ಘಂಟೆ ಹೊತ್ತಿಗೆ) ಮತ್ತೆ ಪ್ರಯಾಣ ಮುಂದುವರೆಸ ಬೇಕಾಗಿದ್ದರಿಂದ.. ಲ್ಯಾರಿ ಅಜ್ಜನ ಕೋಣೆಯಲ್ಲಿ ಮಲಗಿಕೊಂಡೆವು.. ಸವಿತಾ ಶೀತಲ್ ಆಗಲೇ ನಿದ್ರಾದೇವಿಯ ಅಸ್ತ್ರಕ್ಕೆ ಬೆರಗಾಗಿದ್ದರು. ನಾನು ಕೆಲಹೊತ್ತು ಸಂದೇಶಗಳನ್ನು ನೋಡಿ..ಹಾಗೇ.. ನಿದ್ರಾದೇವಿಯ ಮಡಿಲಿಗೆ ಜಾರಿದೆ. 

ಮುಂದಿನ ದಿನದ ದಿನಚರಿಯ ಬಗ್ಗೆ ಮತ್ತೆ ಚಡಪಡಿಕೆ.. ಚಡಪಡಿಕೆ.........................! 

Thursday, March 27, 2014

ಶಿರಬಾಗಿ ವಂದಿಸುವೆ... ಶಿರಸಿಗೆ!!!

ಚಡಪಡಿಕೆ ಚಡಪಡಿಕೆ.................................................!

"ಏನೋ ಹೊಸ ಉಲ್ಲಾಸ ಇಂದು ನನ್ನಲ್ಲಿ ನೋಡು" ಪ್ರಳಯಾಂತಕ ಚಿತ್ರದ ಹಾಡು ಬೇಡವೆಂದರೂ ಕಾಡುತ್ತಿತ್ತು.

"ಒಂದು ಎರಡು ಮೂರು ನಾಲ್ಕು ಆಮೇಲೆ ಏನು" ಆಚನಾಕ್ಕಾಗಿ ಅಣ್ಣಾವ್ರು ಒಂದು ಮುತ್ತಿನ ಕಥೆಯಿಂದ ಎದ್ದು ಹಾಡ ತೊಡಗಿದರು.

ಅರೆ ಏನಿದು ಎಲ್ಲರು ಒಮ್ಮೆಲೇ ಕಾಡಬೇಕೆ.. ಕಾರಿನ ಹಾಡುವ ಪೆಟ್ಟಿಗೆಯ ಕಿವಿ ಹಿಂಡಿದೆ.. ಕಡ್ಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾಡು ನನಗೆ ಅಮಲು ಏರಿಸಲಾರಂಭಿಸಿತು. ಶ್ರೀ ಇವತ್ತು ಏನಾದರೂ ಹುಚ್ಚು ಸಾಹಸಕ್ಕೆ ಕೈಹಾಕು ಎಂದಿತು ಮನಸ್ಸು.. ಮನಸ್ಸಿನ ಮಾತನ್ನ ಇದುವರೆಗೂ ತೆಗೆದುಹಾಕಿಲ್ಲ.

ಅವತ್ತು ಆಫೀಸಿಂದ ಹೊರಟಾಗಿನಿಂದ ಮನೆ ತನಕ ಬರುವ ಸುಮಾರು ಒಂದೂವರೆ ಘಂಟೆ ಅದೇ ಹಾಡನ್ನು ತಿರುಗಿಸಿ ತಿರುಗಿಸಿ ಕೇಳುತ್ತಲೇ ಬಂದೆ..

"ಕೆನ್ ಐ"

"ಶ್ಯೂರ್"

ಇಷ್ಟು ಸಾಕು.. ಮಾತಿನ ಬಂಡಿ ಓಡಿಸಲು..

ದಿನಾಂಕ ನಿಗದಿಯಾಯಿತು.. !

ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..

ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ"

"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"

"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"

"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "

ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..

ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..

"ಭಗವಂತ ಕೊಡುವ ಆಶೀರ್ವಾದ ಕಣೋ ನೀವೆಲ್ಲ...."

ಹೀಗೆ ಸಾಗಿತ್ತು ನಮ್ಮ ಮಾತಿನ ಲಹರಿ.. ಶಿವಮೊಗ್ಗದಲ್ಲಿ ಏನಾದರೂ ಹೊಟ್ಟೆಗೆ ತುಂಬಿಸಿಕೊಳ್ಳೋಣ ಅಂತ.. ನಿಲ್ಲಿಸಿ.. ನನ್ನ ಇಬ್ಬರೂ ಮಕ್ಕಳಿಗೆ ಇಷ್ಟವಾಗುವ ಗೊಲ್ಗುಪ್ಪಾ ಹೊಡೆದೆವು.. 

ಕಾರು ಸಾಗರ ದಾಟಿತು.. ಸಿದ್ದಾಪುರದ ಮಾಯ್ನೋರಮನೆಯ ಮುಂದೆ ಬಂದು ನಿಂತಿತು.. 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು.. 

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಸಣ್ಣಗೆ ಒಂದಷ್ಟು ದೂರ ನೆಡೆದು ಬಂದೆವು... ಅಂಗಳದಲ್ಲಿಯೇ ಚಾಪೆ ಹಾಸಿಕೊಂಡು.. ಹರಟಿದೆವು.. ಬ್ಲಾಗ್, ಕಾಮೆಂಟ್, ಹಾಡು, ಟ್ರಿಪ್ ಹೀಗೆ ಎಲ್ಲವೂ ಮಾತಿಗೆ ಬಂದವು.. ಶೀತಲ್ ಪ್ರವಾಸದಲ್ಲಿ ನನಗೆ ಅಂತಿಕೊಂಡಿರುವವಳು ಇಂದು ಪಕ್ಷ ಬದಲಾಯಿಸಿಬಿಟ್ಟಿದ್ದಳು.. ಇಬ್ಬರೂ ಮಂಗನಿಂದ ಮಾನವ ಎನ್ನುವ ಸಿದ್ಧಾಂತವನ್ನು ಅದಕ್ಕೆ ತದ್ವಿರುದ್ಧವಾಗಿ  
ನಡೆಸುತ್ತಿದ್ದರು.. 

ಬೆಳಿಗ್ಗೆ ಬೇಗನೆ ಏಳಬೇಕಿತ್ತು.. ಒಲ್ಲದ ಮನಸ್ಸಿನಿಂದ.. ಮಲಗಲು ಹೊರಟೆವು.. 

ಅಣ್ಣಾ.. ಗುಡ್ ಮಾರ್ನಿಂಗ್.. ಪುಟ್ಟು ಗುಡ್ ಮಾರ್ನಿಂಗ್ . ಅತ್ತಿಗೆ ಗುಡ್ ಮಾರ್ನಿಂಗ್  .. ಕೋಗಿಲೆ ಸ್ವರ ಕೇಳಿ ಬಂತು.. ಹಲ್ಲು ಬಿಟ್ಟೆವು.. ಚಕ ಚಕ ಬೆಳಗಿನ ಕಾರ್ಯಕ್ರಮ ಮುಗಿಸಿ.. ತಿಂಡಿ ತಿಂದು.. ನಮ್ಮ ಸವಾರಿ ನಮ್ಮ ಪಯಣದ ಮುಂದಿಯ ಗುರಿ ಸಿರ್ಸಿ ಮಹಾಗಣಪತಿ ದೇವಸ್ಥಾನದ ಕಡೆ ಹೊರಟಿತ್ತು.. 



ದೇವಾಲಯಕ್ಕೆ ಹೋಗಿ.. ಸಲ್ಲಿಸಬೇಕಿದ್ದ ಹರಕೆ.. ಪ್ರಾರ್ಥನೆ.. ನಮನಗಳನ್ನು ಸಲ್ಲಿಸಿದ ಮೇಲೆ.. ಅಲ್ಲಿಯೇ ಅಂಗಡಿಯಲ್ಲಿ ಗಣಪನ ಚಿತ್ರ ತೆಗೆದುಕೊಂಡು.. ಮಾರಿಕಾಂಬೆಯ ದರ್ಶನಕ್ಕೆ ನುಗ್ಗಿದೆವು.. ಕೇವಲ ಒಂದು ವಾರದ ಹಿಂದೆಯಷ್ಟೇ ಜಾತ್ರೆ ಆಗಿದ್ದರಿಂದ.. ದೇವಿ ದರ್ಶನ ಸಾಧ್ಯವಿರಲಿಲ್ಲ... ದೇವಾಲಯವನ್ನು ಸುತ್ತಿ ಸುತ್ತಿ.. ಶೀತಲ್ ಗೆ ಅಲ್ಲಿನ ವಿವರ ಕೊಡುತ್ತಾ ಬಂದೆ..
 

ಅಣ್ಣಾ.. ಅಣ್ಣಾ.. ಬನವಾಸಿ ಬನವಾಸಿ ಎಂದಳು.... ಹೌದು ಕಣೋ.. ಎಲ್ಲಿ ನಿನ್ನ ಗೆಳತಿ ಬರೋಲ್ಲವೇ ಎಂದೇ.. ಬರ್ತಾಳೆ ಬರ್ತಾಳೆ.. ಅಂದಳು.. 


ಏನೇ ತಲೆಕೆಟ್ಟಿದೆಯ ನಿನಗೆ... ಬಿಳಿ ಸೀರೆ ತರಬೇಕ.. ನೀ ಬರದೆ ಹೋದರೆ ನೇಣು ಹಾಕಿಕೊಳ್ಳುತ್ತೇನೆ ಹೀಗೆ ಒಂದು ತುಂಟ ಪುಟ್ಟಿ ನಮಗಾಗಿ ಕಾಯುತ್ತಿತ್ತು... ಇನ್ನು ಮುಂದೆ ನನ್ನ ಕಾರಲ್ಲಿ ಹಾಡು ಇಲ್ಲಾ.. ನನ್ನ ಮಾತು ಇಲ್ಲ.. ಸವಿತಾ.. ಶೀತಲ್.. @#$#@ ಮತ್ತು @#$#@$# ಮಾತು ಮಾತು.. ಕಿವಿ ತೂತಾಗುವಷ್ಟು ಮಾತು ಮುಗಿಸುತ್ತಿದ್ದರು.. 

ಬನವಾಸಿ.. ಅಪ್ಪ ಇದು ಮಯೂರನ ರಾಜ್ಯ.. ಎಂದು ಶೀತಲ್ ಕುಣಿಯಲು ಶುರುಮಾಡಿದಳು.. ನಿಜಕ್ಕೂ ಬನವಾಸಿ ಒಂದು ರೋಮಾಂಚನ ಕೊಡುವ ಅದ್ಭುತ ತಾಣ....  ಕಲ್ಲಿನ ಮಂಟಪ.. ಕಲ್ಲಿನ ಬಸವ.. ಎತ್ತ ನೋಡಿದರು ನಮ್ಮನ್ನೇ ನೋಡುವಂತೆ ಅನ್ನಿಸುವ ಸುಂದರ ಕೆತ್ತನೆಗಳು.. ಇದಕ್ಕೆಲ್ಲಾ ಕಳಶವಿಟ್ಟಂತೆ ಮಧುಕೇಶ್ವರ.. ಜೇನಿನ ಬಣ್ಣದಲ್ಲಿ ಇರುವ ಈಶ್ವರನನ್ನು ಎಷ್ಟು ಭಾರಿ ನೋಡಿದರೂ ಸಮಾಧಾನವಿಲ್ಲ.. 

ಕ್ಯಾಮೆರ ಹೊಟ್ಟೆ ತುಂಬಿಕೊಳ್ಳುತ್ತಿತ್ತು.. 

ಮನಸ್ಪೂರ್ತಿ ಆ ತಾಣದಲ್ಲಿ ಇದ್ದು.. ಬನವಾಸಿ ದೇಶಮಂ.. ಬನವಾಸಿ ದೇಶಮಂ ಎನ್ನುತ್ತಾ ಹೃದಯ ತಟ್ಟಿಕೊಳ್ಳುವಂತೆ ಮಾಡುವ ಈ ತಾಣದಲ್ಲಿ ಇದ್ದಷ್ಟು ಹೊತ್ತು ಇನ್ನೂ ಇರಬೇಕು ಎನ್ನುವ ಹಂಬಲ ಹೆಚ್ಚಾಗುತ್ತಿತ್ತು.. 

ಸೂರ್ಯ ಮುಳುಗಲು ಸಿದ್ಧವಾಗುತ್ತಿದ್ದ.. ಜೊತೆಯಲ್ಲಿ ಇಬ್ಬರೂ ಜಗಳ ಶುರುಮಾಡಿದ್ದರು.. ನನ್ನ ಮನೆ ನಮ್ಮಜ್ಜನ ಮನೆ.. ಇಲ್ಲ್ಲಾ ಇಲ್ಲ ನನ್ನ ಮನೆ.. ಇಲ್ಲ ಕಣೋ ನಮ್ಮಜ್ಜನ ಮನೆ.. ಪೈಪೋಟಿ ನಡೆದೆ ಇತ್ತು.. 

ಮುಂದಿನ ಬಾರಿ ಬಂದಾಗ ಖಂಡಿತ ನಿನ್ನ ಮನೆಯಲ್ಲಿ ಉಳಿಯುವೆ.. ಆದರೆ ಈಗ ಬರುತ್ತೇನೆ.. ಎಂದು ಹೇಳಿ ಅವರ ಮನೆಗೆ ಹೋಗಿ.. ಮನೆಯವರ ಮನಸ್ಸನ್ನು ತಟ್ಟಿ ನಕ್ಕು ನಲಿದು .. ಮಗಳ ಅಜ್ಜನ ಮನೆಗೆ ಹೊರಟೆವು... ಮತ್ತೆ ಚರಿತೆ ಮರಳಿತು.. ಶ್ರೀಕಾಂತ್ ನೀವು ನಿಮ್ಮ ಕುಟುಂಬ ಬಂದದ್ದು ಬಹಳ ಖುಷಿಯಾಯ್ತು.. ಆದರೆ ಇಂದು ನಿಮಗೆ ಆತಿಥ್ಯ ಕೊಡೋಕೆ ಆಗೋಲ್ಲ.. ತೊಂದರೆ ಇಲ್ಲ ಬೆಳಿಗ್ಗೆ ಉಪಹಾರದಲ್ಲಿ ನಿಮ್ಮನ್ನು ಮುಳುಗಿಸುತ್ತೇವೆ ಎಂದರು.. 

ಮತ್ತೊಮ್ಮೆ ಮಾತು ಮಾತು ಮಾತು.. ಆಕಾಶ ತೂತಾಗಿ ಬೀಳುವಷ್ಟು ಮಾತು.. ಕನಸಿನಲ್ಲೂ ಊಹಿಸಿಕೊಳ್ಳದಷ್ಟು ಮಧುರವಾಗಿ ಕ್ಷಣಗಳು ಕಳೆಯುತ್ತಿದ್ದವು.. ಅರೆ ಹೀಗೂ ಉಂಟೆ . ಬರಿ ಅಂತರ್ಜಾಲದಲ್ಲಿ ಪರಿಚಯವಾಗಿ.. ಇಂದು ಮನಸ್ಸಿನ ಮೇಲೆ ನಡೆಯುತ್ತಿರುವ ಈ ರೀತಿಯ ಪ್ರೀತಿ ವಿಶ್ವಾಸ ನಿಜಕ್ಕೂ ಇದು ಇಂದ್ರಜಾಲವೇ ಎನ್ನಿಸುತ್ತಿತ್ತು.. 

ಬೆಳಿಗ್ಗೆ ಒಂದು ಪುಟ್ಟಾ ಸುತ್ತಾ ಮುತ್ತಾ ಇರುವ ವಿಹಂಗಮ ನೋಟ.. ಜೊತೆಯಲ್ಲಿ ಬಿಸಿ ಬಿಸಿ ಕಾಫಿ.. ಆಹಾ.. ಹಳ್ಳಿಯ ವಾತಾವರಣಕ್ಕೆ ಸಾಟಿ.. ಹಳ್ಳಿಯೇ.. !

ಸಹಸ್ರಲಿಂಗ ಕ್ಷೇತ್ರ ಕೆಲವೇ ನಿಮಿಷಗಳ ಹಾದಿಯಾಗಿದ್ದರಿಂದ..ಅಲ್ಲಿಗೆ ಸಾಗಿದೆವು.. ಬಯಲಿನಲ್ಲಿ ಕಾಣುವ ತಾಣವೆಲ್ಲಾ ಲಿಂಗದ ರೂಪವೇ.. ಒಂದು ಕಡೆ ಲಿಂಗ ಇದ್ದಾರೆ ಇನ್ನೊಂದು ಕಡೆ ಬಸವ.. ಎನಿಸಿದರೆ ಎಣಿಕೆ ತಪ್ಪುತ್ತಿತ್ತು.. ಶಾಲ್ಮಲಾ ನದಿಯ ಹರಿವು ಕಡಿಮೆ ಇದ್ದದರಿಂದ ಕಳೆದ ಬಾರಿ ನೋಡಿದ್ದಕ್ಕಿಂತ ಇನ್ನು ಹೆಚ್ಚಿನ ಲಿಂಗಗಳ ದರ್ಶನ ಸಿಕ್ಕಿತು.. ತೂಗು ಸೇತುವೆಯ ಮೇಲೆ ನಡೆದಾಟ.. ಮರೆಯಲು ಆಗುವುದೇ ಇಲ್ಲಾ.. 



ಅವಳ ಅಜ್ಜನ ಮನೆಯ ತಿಂಡಿ ಬಾ ಬಾ ಎಂದು ಕರೆಯುತ್ತಿತ್ತು.. ಹೊಟ್ಟೆಯ ಮೂಲೆ ಮೂಲೆಗೂ ತುರುಕಿಕೊಂಡು.. ಮಾಮೂಲಿಗಿಂತ ತುಸು ಹೆಚ್ಚೇ ತಿಂದೆವು.. 

ಸರ್ಜಿ ನಮಸ್ಕಾರ.. ನೀವು ಯಾರು ಅಂತ ನನಗೆ ಗೊತ್ತು.. "ಹಾವು ಕಚ್ಚಿದ ಪ್ರಸಂಗ" ಇವತ್ತು ನನ್ನನ್ನು ನಗೆಗಡಲಲ್ಲಿ ಮೀಯಿಸುತ್ತದೆ.. ಅರೆ ಇವರೇ ನಮ್ಮ ಪ್ರಕಾಶಣ್ಣ ಅರ್ಥಾತ್ ಪ್ರಕಾಶ್ ಹೆಗ್ಗಡೆಯವರ ಅಗ್ರಜ.  ಚೋಟೆ ಮೀಯ ಚೋಟೆ ಮಿಯ ಬಡೇ ಮಿಯ ಸುಬಾಹನಲ್ಲ ಎನ್ನುವ ಹಾಗೆ.. ಅಣ್ಣ ತಮ್ಮ ಇಬ್ಬರೂ ಒಂದೊಂದು ನಗೆ ಬಾಂಬುಗಳೇ...  ಮನೆಯವರನ್ನು ಭೇಟಿ ಮಾಡಿದ್ದು ಬಹಳ ಖುಷಿಯಾಗಿತ್ತು.. ಪ್ರಕಾಶಣ್ಣ ಅವರ ಅಣ್ಣ ಅತ್ತಿಗೆ.. ಅಕ್ಕ ಭಾವ ಆಹಾ ಒಂದು ಚಂದದ ಸಂಸಾರ.. ! 

ಅಲ್ಲಿಯೇ ಬಹಳ ಹೊತ್ತು ಇರಬೇಕು ಎನ್ನುವ ಹಂಬಲ ಇದ್ದರೂ.. ವಾಪಾಸ್ ಬೆಂಗಳೂರಿಗೆ ಬರುವ ಪ್ಲಾನ್ ಇದ್ದದರಿಂದ ಅವರ ಬಲವಂತದ ಮಧ್ಯೆಯೂ.. ಅವರಿಗೆ ತುಸು ಬೇಜಾರಾಗಿದ್ದರು ಸಮಾಧಾನ ಪಡಿಸಿ.. ಮತ್ತೆ ಮಾಯ್ನೋರಮನೆಯ ಕಡೆ ನಾಗಾಲೋಟದಿಂದ ಕಾರು ಓಡುತ್ತಿತ್ತು.. !

ಸಿದ್ದಾಪುರಕ್ಕೆ ಬಂದು.. ಕೊಂಚ ಹೊತ್ತು ವಿಶ್ರಮಿಸಿಕೊಂಡೆವು.. ಅಡಿಗೆ ಮನೆಯಿಂದ ಘಮ ಘಮ.. ಹೊಟ್ಟೆ ಚೂರು ಚೂರು ಏನಾದರೂ ಬೇಕು ಎಂದು ಅರಚುತ್ತಿತ್ತು... ಊಟ ರೆಡಿ ಅಣ್ಣಾ ಅಂದಾಗ.. !!!!!

ಸುಮಾರು ನಾಲ್ಕು ಘಂಟೆಗೆ ಹೊರಟೆವು... ಮೊದಲ ಗುರಿ ಇದ್ದದ್ದು ವರದ ಹಳ್ಳಿ ಅಥವಾ ಶ್ರೀಧರ ಸ್ವಾಮಿಗಳ ಆಶ್ರಮ.. ಇದರ ಮಧ್ಯೆ ಇಕ್ಕೇರಿಯ ದರ್ಶನ.. ಎರಡು ತರಾತುರಿಯಲ್ಲಿ ಮುಗಿಸಿ.. ಚಿಕಮಗಳೂರಿನತ್ತ ಓಡುತ್ತಿತ್ತು... 

ಅಣ್ಣಾ.. ಅಣ್ಣಾ.. ಕಣ್ಣು ಕೆಂಪಗೆ ಮಾಡಿಕೊಂಡು ಬಿಕ್ಕಳಿಸುತ್ತಿದ್ದಳು.. ಅಳಬೇಡ ಕಣೋ ಇನ್ನೊಮ್ಮೆ ಮತ್ತೆ ಹೋಗೋಣ.. ಒಂದೆರಡು ಮೂರುದಿನ ನಿಮ್ಮ ಮನೆಯಲ್ಲಿ ಇದ್ದು ಬಿಡ್ತೀನಿ.. ಎಲ್ಲೂ ಹೋಗೋದೇ ಬೇಡ .. ಆಯ್ತಾ!!!

ಏನೋ ಗೊತ್ತಿಲ್ಲ ಅಣ್ಣ.. ನಿಮ್ಮನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೀನಿ.. ಸರಿ ಅಣ್ಣಾ ಸಿಗ್ತೀನಿ ಮತ್ತೆ ಬ್ಲಾಗ್.. ಫೇಸ್ ಬುಕ್, ಜಿಟಾಕ್.. ವ್ಹಾಟ್ಸಪ್.. ಅಣ್ಣ ಒಂದು ಹಗ್ ನಿಮಗೆ ಮತ್ತು ಪುಟ್ಟುಗೆ... 

ಸರಿ ಕಣೋ ಹೊರಡ್ತೀನಿ ಅಂದೇ!!!

ಕಣ್ಣಂಚಿನ ಆ ಮಾತಲ್ಲಿ ನೂರಾರು ಹೇಳಲಾಗದ ಭಾವಗಳು ನಿರೂಪಾಯವಾಗಿ ಸುಮ್ಮನೆ ಕೂತಿದ್ದವು.. 

ಅಣ್ಣಾ ಇನ್ನು ಮುಂದೆ ಪಾ ಎಂದು ಕರೆಯುತ್ತೇನೆ ಎಂದಳು.. ನೀನು ಹೇಗೆ ಕರೆದರೂ ಓಕೆ ಮಗಳೇ ಅಂದೇ.. 

ಸರಿ ಕಣೋ ಬೆಂಗಳೂರಿಗೆ ತಲುಪಿದ ಮೇಲೆ ಮೆಸೇಜ್ ಮಾಡ್ತೀನಿ.. 

ಪಾ ಮೆಸೇಜ್ ಬೇಡ ಕರೆ ಮಾಡಿ... ನಾ ನಿಮ್ಮ ಕರೆಗೆ ಕಾಯ್ತಾ ಇರ್ತೀನಿ.. 

****************************

ರೀ ಶ್ರೀ ರೀ ಶ್ರೀ ರೀ ಶ್ರೀ.. ಆಫೀಸ್ ಗೆ ಹೋಗೋಲ್ವ.. ಆಗಲೇ ಏಳು ಘಂಟೆ.. .. ಸುಮಾರು ಹನ್ನೆರಡು ಘಂಟೆ ಅಷ್ಟೊತ್ತಿಗೆ ಅಲ್ಲಿಗೆ ಬರುತ್ತೇವೆ.. ಹೋಗೋಣ.. ಈಗಲೇ ಕಾರಲ್ಲಿ ಲಗೇಜ್ ಹಾಕಿಬಿಡಿ... !

ಕಣ್ಣುಜ್ಜಿ ಕೊಂಡೆ... ಅರೆ ಇದೇನು.. ಹೋಗುವ ಮೊದಲೇ.. ಕನಸು ಕಂಡು ಬಿಟ್ಟೆನೆ... ಆಹಾ!!!

****************************
ಮತ್ತೆ ಚಡಪಡಿಕೆ ಚಡಪಡಿಕೆ..................................................!