Monday, March 31, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಒಂದು - !!!

ಚಡಪಡಿಕೆ ಚಡಪಡಿಕೆ.................................................!



ನನಗೆ ಹುಚ್ಚಿತ್ತು.. ಪ್ರವಾಸಕ್ಕೆ ಹೋಗುವ ಮೊದಲೇ.. ಆ ಪ್ರವಾಸದ ಬಗ್ಗೆ ಬರೆದು ನಂತರ ಬರೆದ ಹಾಗೆಯೇ ಪ್ರವಾಸವನ್ನು ಅನುಭವಿಸಬೇಕು ಎಂದು.. ಈ ಹುಚ್ಚಿನ ಮೊದಲ ಮಜಲು ಈ ಲೇಖನ ಈ ಕೊಂಡಿಯಲ್ಲಿದೆ.. ಕೂಸು ಹುಟ್ಟುವ ಮುಂಚೆಯೇ ಕುಲಾವಿ!

ಸೂರ್ಯಂಗೇ ಟಾರ್ಚ್...  ಪ್ರವಾಸಕ್ಕೆ ಟಾರ್ಚ್!!!

ರವಿಯೂ ಕಾಯುತ್ತಿದ್ದ ಈ ಪ್ರವಾಸಕ್ಕೆ ಬೆಳಕಾಗಲು!!!
ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..


ಅಪ್ಪ ಭಾಗ್ಯ ಅಕ್ಕನನ್ನು ನಾನೆ ಕರೆದು ಕೊಂಡು ಬರುತ್ತೇನೆ ಎಂದಳು ನನ್ನ ಸ್ನೇಹಿತೆ ಶೀತಲ್!! 


ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ" 



"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"



"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"



"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "



ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..


ರವಿ ನಮ್ಮ ಪಯಣಕ್ಕೆ ಶುಭಕೋರಿ ತನ್ನ ಗೂಡನ್ನು ಸೇರಲು ಹೊರಟ ಕ್ಷಣ!


ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..


ನಾ ಹಲ್ಲು ಬಿಡುವುದನ್ನು ಬಿಟ್ಟು ಬೇರೇನೂ ತೋಚಲಿಲ್ಲ ಕಾರಣ.. ನನಗೂ ಅದೇ ಪ್ರಶ್ನೆಗಳು ಕಾಡುತ್ತಿದ್ದವು. 

ನಿಮ್ಮ ಪ್ರವಾಸಕ್ಕೆ ನಾನು ಬರುತ್ತೇನೆ ಎಂದ ಶ್ವಾನ ಮಹಾರಾಜ!!! 

"ಶ್ರೀ ಇಷ್ಟು ದೂರ ಬಂದಿದ್ದೇವೆ.. ದೊಡ್ಡಮ್ಮನ ಮನೆಗೆ ಹೋಗಿ ಬರೋಣ" ಸವಿ ಉವಾಚ.. 

ಶೀತಲ್ ಕುಣಿಯುತ್ತಿದ್ದಳು..  ಮೆಲ್ಲಗೆ ಮಗಳ (ಭಾಗ್ಯ) ಕಡೆ ನೋಡಿದೆ ..

"ಅಣ್ಣಾ ನೀವು ಎಲ್ಲಿಗೆ ಕರೆದುಕೊಂಡು ಹೋದರು ನಾ ಬರುವೆ ನಿಮ್ಮೊಡನೆ.. "ಭಾಗ್ಯ ಉವಾಚ!

ಸರಿ ಶಿವಮೊಗ್ಗದ ಕೋಟೆ ಆಂಜನೇಯನ ಬೀದಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದೆವು.. ಅಲ್ಲಿ ನದಿಯಲ್ಲಿರುವ ನೀರು ಶರಧಿಗೆ ಸೇರುವಂತೆ.. ಪ್ರೀತಿಯ ಸಾಗರವನ್ನೇ ಹರಿಸಿ ಬಿಟ್ಟರು.. ಕೇವಲ ಒಂದು ಹತ್ತು ಹದಿನೈದು ನಿಮಿಷದ ಭೇಟಿ.. ಎರಡು ಘಂಟೆಗಳ ಭೇಟಿಗೆ ತಿರುಗಿತು.... 

ಹೊಟ್ಟೆ ತುಂಬಾ ಊಟ ಬಾಯಿ ತುಂಬಾ ಮಾತು.. ಸಂಕೋಚದ ಮುದ್ದೆ ಎನಿಸಿಕೊಂಡಿದ್ದ ಭಾಗ್ಯ.. ಉತ್ಸಾಹದ ಚಿಲುಮೆಯಾಗಿದ್ದಳು.. 

ಸುಮಾರು ಹೊತ್ತು ಇದ್ದು.. ಮಾತು ಮಾತು ಇನ್ನಷ್ಟು ಮಾತಿನ ನಂತರ ದೊಡ್ಡಮ್ಮನ ಆಶೀರ್ವಾದ ಪಡೆದು.. ಅಣ್ಣ ತಮ್ಮ ಎನ್ನುವ ಮಾತೆ ಇಲ್ಲದೆ ಗೆಳೆಯರ ತರಹ ಮಾತಾಡುತ್ತಿದ್ದ ಸುಬ್ಬರಾಮು ದಂಪತಿಗಳಿಂದ ಅಪ್ಪಣೆ ಪಡೆದು ಹೊರಟೆವು... !

ಮೆಲ್ಲನೆ ಒರೆಗಣ್ಣಲ್ಲಿ ನೋಡಿ "ಅಣ್ಣಾ ಗಿರೀಶ್ ಮತ್ತು ಅವರ ಸ್ನೇಹಿತ ಶಿವಮೊಗ್ಗದಲ್ಲಿ ಇದ್ದಾರಂತೆ" ಭೇಟಿ ಮಾಡೋಣ.. 

ಕಣ್ಣು ಮಿಟುಕಿಸಿದೆ... ನನ್ನ ಪ್ರೀತಿಯ ಕಾರು ಶಿವಮೊಗ್ಗದ ವಾಹನ ನಿಲ್ದಾಣದ ಮುಂದೆ ಹಾಜಿರ್.. ಗಿರೀಶ್ ಮತ್ತು ಅವರ ಸ್ನೇಹಿತರಾದ ಪೂರ್ಣೇಶ್ ನಿಂತಿದ್ದರು... ಮಾತು ಇನ್ನಷ್ಟು ಮಾತು.. ಭಾಗ್ಯ ಪುಟ್ಟಿಯ ಸಂತಸದ ನಗು.. ಅರೆ ಘಳಿಗೆ ಅರೆ ಘಳಿಗೆಯಲ್ಲೂ ಬದಲಾಗುತ್ತಿದ್ದ ನಮ್ಮ ಪಯಣದ ಪಟ್ಟಿ.. 

ಸಿದ್ದಾಪುರದಿಂದ ಕರೆ ಬರುತ್ತಲೇ ಇತ್ತು.. ಎಷ್ಟು ಹೊತ್ತಿಗೆ ಬರ್ತೀರಿ.. ಆ ಪ್ರಶ್ನೆಗೆ ಯಾರಲ್ಲೂ ಉತ್ತರವಿರದ ಪ್ರಶ್ನೆಯಾಗಿತ್ತು.. :-)

ಗಿರೀಶ್ ಮತ್ತು ಸ್ನೇಹಿತರಿಗೆ ಎಲ್ಲಾ ಆಮಿಷ ತೋರಿದೆವು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಲು.. ಆದ್ರೆ ಅವರು (AAP) ಪೊರಕೆ ಗುರುತಿನ ಮಾಲೀಕನಂತೆ.. ಗಲಿಬಿಲಿ ನಿರ್ಧಾರವಿರಲಿಲ್ಲ.. ಇಲ್ಲ ಸರ್ ನಮ್ಮದು ಆಗಲೇ ಪೂರ್ವ ನಿಯೋಜಿತ ಕಾರ್ಯಕ್ರಮ.. ದಯಮಾಡಿ ಕ್ಷಮಿಸಿ ಮತ್ತೊಮ್ಮೆ ಬರುತ್ತೇವೆ.. ಎಂದರು. 

ಸಾಗರದ ನಿರೀಕ್ಷಣ ಮಂದಿರದತ್ತ ಕಾರು ಓಡಿತು.. ನಗುಮೊಗದ ಅಧ್ಯಾಪಕರು ಸರಿ ರಾತ್ರಿ ಹನ್ನೆರಡರ ಆಸುಪಾಸಿನಲ್ಲಿಯೂ ನಸು ನಗುತ್ತ ನಮ್ಮನ್ನು ಮಾತಾಡಿಸಿ ಬನ್ನಿ ಊಟ ಮಾಡುವಿರಂತೆ.. ಇಲ್ಲಾ ಕಡೆ ಪಕ್ಷ ಕಾಫಿಯಾದರೂ ಕುಡಿಯಲೇ ಬೇಕು ಎಂದು ಒತ್ತಾಯ ಮಾಡಿದರು. ಆಗದು ಎಂದು ಹೇಳಲು ಆಗಲಿಲ್ಲ.. 

ಏನೀ ಸ್ನೇಹ ಸಂಬಂಧ. ಎಲ್ಲಿಯದೂ ಈ ಅನುಬಂಧ.. ಸರಿ ರಾತ್ರಿಯಲ್ಲಿ ಬ್ಲಾಗ್ಲೋಕದ ಜೊತೆಯಲ್ಲಿ!!! 

ಭಾಗ್ಯ ನಗುತ್ತಲೇ ಇದ್ದಳು.. "ಅಣ್ಣಾ ನಿಮ್ಮ ಹೃದಯ ನಿಮ್ಮ ಕಾರಿಗಿಂತ ದೊಡ್ಡದು....:) "

ಮಧ್ಯರಾತ್ರಿಯಲ್ಲಿ ಪರಿಚಯವೇ ಇಲ್ಲದ ಒಂದು ಕುಟುಂಬದ ಭೇಟಿಗೆ ಮನ ಕಾಯುತ್ತಿತ್ತು. ಮುದ್ದಾದ ಮಗುವಿನ.. ತಾಳ್ಮೆಯ ಮಡದಿ ಕೂಡಿದ ಚಂದದ ಸಂಸಾರ ಅವರದ್ದು.. ಬನ್ನಿ ಬನ್ನಿ ಸ್ವಲ್ಪ ಹೊತ್ತು ಮಾತಾಡುತ್ತಾ ಕೂತಿರಿ.. ಬಿಸಿ ಬಿಸಿ ಅಡಿಗೆ ಮಾಡಿಬಿಡುತ್ತೇನೆ. ಆ ಮಲೆನಾಡಿನ ಹೆಬ್ಬಾಗಿಲಲ್ಲಿ ಸರಿ ರಾತ್ರಿಯ ತಣ್ಣನೆ ಗಾಳಿಯಲ್ಲೂ ಮೈ ಸಣ್ಣಗೆ ಬೆವರಿತು. 

ಬೇಡ ಸರ್.. ಕಾಫಿ ಮಾತ್ರ ಕೊಡಿ.. ಭಾಗ್ಯ ಮತ್ತೆ ಮತ್ತೆ ನಗುತ್ತಿದ್ದಳು.. "ಅಣ್ಣ ನಿಮಗೆ ಕಾಫಿ ಸಿಕ್ಕರೆ.. ಆ ದೇವರನ್ನು ಕೂಡ ಒಮ್ಮೆ.... ಹಹಹ ಹಹಹ" ಅವಳ ನಗು ನಿಂತಿರಲಿಲ್ಲ. 

ಕಾಫಿ ಬಂತು.. ಸರ ಸರ ಕುಡಿದು.. ದೇವರಲ್ಲಿ ಪ್ರಾರ್ಥಿಸಿದೆವು. ದೇವರೇ ಇನ್ನು ನಮ್ಮ ಮುಂದಿನ ನಿಲ್ದಾಣ ಸಿದ್ದಾಪುರದ ಮಾಯ್ನೋರಮನೆ ಆಗಿರಲಪ್ಪ. ಕಾರಣ ಭಾಗ್ಯ ಪುಟ್ಟಿಯ ಮೊಬೈಲ್ ಅಳುತ್ತಲೇ ಇತ್ತು.. ಪಾಪ ಅದನ್ನು ಎತ್ತಿ ಕೊಂಡು ಎತ್ತಿ ಕೊಂಡು ಸಮಾಧಾನ ಮಾಡಿ ಮಾಡಿ.... !

"ಅಣ್ಣಾ ಮಾತಾಡುತ್ತಿರಿ.. "

ಸರಿ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳು.. ಎಲ್ಲವೂ ನನ್ನ ಬಾಯಿಂದ ಅನಾವರಣಗೊಳ್ಳುತ್ತಿದ್ದವು!

ಕಾರು ಸಿದ್ದಾಪುರ ದಾಟಿತು.. ಮಾಯ್ನೋರಮನೆಯ ಮುಂದೆ ಬಂದು ನಿಂತಿತು..!!! 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಓಡಿಸಿದ್ದ ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು..!

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಆದರೆ ಮರುದಿನ ಬೆಳಿಗ್ಗೆ.. (ಮರುದಿನ ಬೆಳಿಗ್ಗೆ ವಾಟ್ ನಾನ್ಸೆನ್ಸ್.. ನಾವು ತಲುಪಿದ್ದು ಬೆಳಗಿನ ಜಾವ ಎರಡು ಘಂಟೆ ಹೊತ್ತಿಗೆ) ಮತ್ತೆ ಪ್ರಯಾಣ ಮುಂದುವರೆಸ ಬೇಕಾಗಿದ್ದರಿಂದ.. ಲ್ಯಾರಿ ಅಜ್ಜನ ಕೋಣೆಯಲ್ಲಿ ಮಲಗಿಕೊಂಡೆವು.. ಸವಿತಾ ಶೀತಲ್ ಆಗಲೇ ನಿದ್ರಾದೇವಿಯ ಅಸ್ತ್ರಕ್ಕೆ ಬೆರಗಾಗಿದ್ದರು. ನಾನು ಕೆಲಹೊತ್ತು ಸಂದೇಶಗಳನ್ನು ನೋಡಿ..ಹಾಗೇ.. ನಿದ್ರಾದೇವಿಯ ಮಡಿಲಿಗೆ ಜಾರಿದೆ. 

ಮುಂದಿನ ದಿನದ ದಿನಚರಿಯ ಬಗ್ಗೆ ಮತ್ತೆ ಚಡಪಡಿಕೆ.. ಚಡಪಡಿಕೆ.........................! 

Thursday, March 27, 2014

ಶಿರಬಾಗಿ ವಂದಿಸುವೆ... ಶಿರಸಿಗೆ!!!

ಚಡಪಡಿಕೆ ಚಡಪಡಿಕೆ.................................................!

"ಏನೋ ಹೊಸ ಉಲ್ಲಾಸ ಇಂದು ನನ್ನಲ್ಲಿ ನೋಡು" ಪ್ರಳಯಾಂತಕ ಚಿತ್ರದ ಹಾಡು ಬೇಡವೆಂದರೂ ಕಾಡುತ್ತಿತ್ತು.

"ಒಂದು ಎರಡು ಮೂರು ನಾಲ್ಕು ಆಮೇಲೆ ಏನು" ಆಚನಾಕ್ಕಾಗಿ ಅಣ್ಣಾವ್ರು ಒಂದು ಮುತ್ತಿನ ಕಥೆಯಿಂದ ಎದ್ದು ಹಾಡ ತೊಡಗಿದರು.

ಅರೆ ಏನಿದು ಎಲ್ಲರು ಒಮ್ಮೆಲೇ ಕಾಡಬೇಕೆ.. ಕಾರಿನ ಹಾಡುವ ಪೆಟ್ಟಿಗೆಯ ಕಿವಿ ಹಿಂಡಿದೆ.. ಕಡ್ಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾಡು ನನಗೆ ಅಮಲು ಏರಿಸಲಾರಂಭಿಸಿತು. ಶ್ರೀ ಇವತ್ತು ಏನಾದರೂ ಹುಚ್ಚು ಸಾಹಸಕ್ಕೆ ಕೈಹಾಕು ಎಂದಿತು ಮನಸ್ಸು.. ಮನಸ್ಸಿನ ಮಾತನ್ನ ಇದುವರೆಗೂ ತೆಗೆದುಹಾಕಿಲ್ಲ.

ಅವತ್ತು ಆಫೀಸಿಂದ ಹೊರಟಾಗಿನಿಂದ ಮನೆ ತನಕ ಬರುವ ಸುಮಾರು ಒಂದೂವರೆ ಘಂಟೆ ಅದೇ ಹಾಡನ್ನು ತಿರುಗಿಸಿ ತಿರುಗಿಸಿ ಕೇಳುತ್ತಲೇ ಬಂದೆ..

"ಕೆನ್ ಐ"

"ಶ್ಯೂರ್"

ಇಷ್ಟು ಸಾಕು.. ಮಾತಿನ ಬಂಡಿ ಓಡಿಸಲು..

ದಿನಾಂಕ ನಿಗದಿಯಾಯಿತು.. !

ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..

ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ"

"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"

"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"

"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "

ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..

ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..

"ಭಗವಂತ ಕೊಡುವ ಆಶೀರ್ವಾದ ಕಣೋ ನೀವೆಲ್ಲ...."

ಹೀಗೆ ಸಾಗಿತ್ತು ನಮ್ಮ ಮಾತಿನ ಲಹರಿ.. ಶಿವಮೊಗ್ಗದಲ್ಲಿ ಏನಾದರೂ ಹೊಟ್ಟೆಗೆ ತುಂಬಿಸಿಕೊಳ್ಳೋಣ ಅಂತ.. ನಿಲ್ಲಿಸಿ.. ನನ್ನ ಇಬ್ಬರೂ ಮಕ್ಕಳಿಗೆ ಇಷ್ಟವಾಗುವ ಗೊಲ್ಗುಪ್ಪಾ ಹೊಡೆದೆವು.. 

ಕಾರು ಸಾಗರ ದಾಟಿತು.. ಸಿದ್ದಾಪುರದ ಮಾಯ್ನೋರಮನೆಯ ಮುಂದೆ ಬಂದು ನಿಂತಿತು.. 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು.. 

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಸಣ್ಣಗೆ ಒಂದಷ್ಟು ದೂರ ನೆಡೆದು ಬಂದೆವು... ಅಂಗಳದಲ್ಲಿಯೇ ಚಾಪೆ ಹಾಸಿಕೊಂಡು.. ಹರಟಿದೆವು.. ಬ್ಲಾಗ್, ಕಾಮೆಂಟ್, ಹಾಡು, ಟ್ರಿಪ್ ಹೀಗೆ ಎಲ್ಲವೂ ಮಾತಿಗೆ ಬಂದವು.. ಶೀತಲ್ ಪ್ರವಾಸದಲ್ಲಿ ನನಗೆ ಅಂತಿಕೊಂಡಿರುವವಳು ಇಂದು ಪಕ್ಷ ಬದಲಾಯಿಸಿಬಿಟ್ಟಿದ್ದಳು.. ಇಬ್ಬರೂ ಮಂಗನಿಂದ ಮಾನವ ಎನ್ನುವ ಸಿದ್ಧಾಂತವನ್ನು ಅದಕ್ಕೆ ತದ್ವಿರುದ್ಧವಾಗಿ  
ನಡೆಸುತ್ತಿದ್ದರು.. 

ಬೆಳಿಗ್ಗೆ ಬೇಗನೆ ಏಳಬೇಕಿತ್ತು.. ಒಲ್ಲದ ಮನಸ್ಸಿನಿಂದ.. ಮಲಗಲು ಹೊರಟೆವು.. 

ಅಣ್ಣಾ.. ಗುಡ್ ಮಾರ್ನಿಂಗ್.. ಪುಟ್ಟು ಗುಡ್ ಮಾರ್ನಿಂಗ್ . ಅತ್ತಿಗೆ ಗುಡ್ ಮಾರ್ನಿಂಗ್  .. ಕೋಗಿಲೆ ಸ್ವರ ಕೇಳಿ ಬಂತು.. ಹಲ್ಲು ಬಿಟ್ಟೆವು.. ಚಕ ಚಕ ಬೆಳಗಿನ ಕಾರ್ಯಕ್ರಮ ಮುಗಿಸಿ.. ತಿಂಡಿ ತಿಂದು.. ನಮ್ಮ ಸವಾರಿ ನಮ್ಮ ಪಯಣದ ಮುಂದಿಯ ಗುರಿ ಸಿರ್ಸಿ ಮಹಾಗಣಪತಿ ದೇವಸ್ಥಾನದ ಕಡೆ ಹೊರಟಿತ್ತು.. 



ದೇವಾಲಯಕ್ಕೆ ಹೋಗಿ.. ಸಲ್ಲಿಸಬೇಕಿದ್ದ ಹರಕೆ.. ಪ್ರಾರ್ಥನೆ.. ನಮನಗಳನ್ನು ಸಲ್ಲಿಸಿದ ಮೇಲೆ.. ಅಲ್ಲಿಯೇ ಅಂಗಡಿಯಲ್ಲಿ ಗಣಪನ ಚಿತ್ರ ತೆಗೆದುಕೊಂಡು.. ಮಾರಿಕಾಂಬೆಯ ದರ್ಶನಕ್ಕೆ ನುಗ್ಗಿದೆವು.. ಕೇವಲ ಒಂದು ವಾರದ ಹಿಂದೆಯಷ್ಟೇ ಜಾತ್ರೆ ಆಗಿದ್ದರಿಂದ.. ದೇವಿ ದರ್ಶನ ಸಾಧ್ಯವಿರಲಿಲ್ಲ... ದೇವಾಲಯವನ್ನು ಸುತ್ತಿ ಸುತ್ತಿ.. ಶೀತಲ್ ಗೆ ಅಲ್ಲಿನ ವಿವರ ಕೊಡುತ್ತಾ ಬಂದೆ..
 

ಅಣ್ಣಾ.. ಅಣ್ಣಾ.. ಬನವಾಸಿ ಬನವಾಸಿ ಎಂದಳು.... ಹೌದು ಕಣೋ.. ಎಲ್ಲಿ ನಿನ್ನ ಗೆಳತಿ ಬರೋಲ್ಲವೇ ಎಂದೇ.. ಬರ್ತಾಳೆ ಬರ್ತಾಳೆ.. ಅಂದಳು.. 


ಏನೇ ತಲೆಕೆಟ್ಟಿದೆಯ ನಿನಗೆ... ಬಿಳಿ ಸೀರೆ ತರಬೇಕ.. ನೀ ಬರದೆ ಹೋದರೆ ನೇಣು ಹಾಕಿಕೊಳ್ಳುತ್ತೇನೆ ಹೀಗೆ ಒಂದು ತುಂಟ ಪುಟ್ಟಿ ನಮಗಾಗಿ ಕಾಯುತ್ತಿತ್ತು... ಇನ್ನು ಮುಂದೆ ನನ್ನ ಕಾರಲ್ಲಿ ಹಾಡು ಇಲ್ಲಾ.. ನನ್ನ ಮಾತು ಇಲ್ಲ.. ಸವಿತಾ.. ಶೀತಲ್.. @#$#@ ಮತ್ತು @#$#@$# ಮಾತು ಮಾತು.. ಕಿವಿ ತೂತಾಗುವಷ್ಟು ಮಾತು ಮುಗಿಸುತ್ತಿದ್ದರು.. 

ಬನವಾಸಿ.. ಅಪ್ಪ ಇದು ಮಯೂರನ ರಾಜ್ಯ.. ಎಂದು ಶೀತಲ್ ಕುಣಿಯಲು ಶುರುಮಾಡಿದಳು.. ನಿಜಕ್ಕೂ ಬನವಾಸಿ ಒಂದು ರೋಮಾಂಚನ ಕೊಡುವ ಅದ್ಭುತ ತಾಣ....  ಕಲ್ಲಿನ ಮಂಟಪ.. ಕಲ್ಲಿನ ಬಸವ.. ಎತ್ತ ನೋಡಿದರು ನಮ್ಮನ್ನೇ ನೋಡುವಂತೆ ಅನ್ನಿಸುವ ಸುಂದರ ಕೆತ್ತನೆಗಳು.. ಇದಕ್ಕೆಲ್ಲಾ ಕಳಶವಿಟ್ಟಂತೆ ಮಧುಕೇಶ್ವರ.. ಜೇನಿನ ಬಣ್ಣದಲ್ಲಿ ಇರುವ ಈಶ್ವರನನ್ನು ಎಷ್ಟು ಭಾರಿ ನೋಡಿದರೂ ಸಮಾಧಾನವಿಲ್ಲ.. 

ಕ್ಯಾಮೆರ ಹೊಟ್ಟೆ ತುಂಬಿಕೊಳ್ಳುತ್ತಿತ್ತು.. 

ಮನಸ್ಪೂರ್ತಿ ಆ ತಾಣದಲ್ಲಿ ಇದ್ದು.. ಬನವಾಸಿ ದೇಶಮಂ.. ಬನವಾಸಿ ದೇಶಮಂ ಎನ್ನುತ್ತಾ ಹೃದಯ ತಟ್ಟಿಕೊಳ್ಳುವಂತೆ ಮಾಡುವ ಈ ತಾಣದಲ್ಲಿ ಇದ್ದಷ್ಟು ಹೊತ್ತು ಇನ್ನೂ ಇರಬೇಕು ಎನ್ನುವ ಹಂಬಲ ಹೆಚ್ಚಾಗುತ್ತಿತ್ತು.. 

ಸೂರ್ಯ ಮುಳುಗಲು ಸಿದ್ಧವಾಗುತ್ತಿದ್ದ.. ಜೊತೆಯಲ್ಲಿ ಇಬ್ಬರೂ ಜಗಳ ಶುರುಮಾಡಿದ್ದರು.. ನನ್ನ ಮನೆ ನಮ್ಮಜ್ಜನ ಮನೆ.. ಇಲ್ಲ್ಲಾ ಇಲ್ಲ ನನ್ನ ಮನೆ.. ಇಲ್ಲ ಕಣೋ ನಮ್ಮಜ್ಜನ ಮನೆ.. ಪೈಪೋಟಿ ನಡೆದೆ ಇತ್ತು.. 

ಮುಂದಿನ ಬಾರಿ ಬಂದಾಗ ಖಂಡಿತ ನಿನ್ನ ಮನೆಯಲ್ಲಿ ಉಳಿಯುವೆ.. ಆದರೆ ಈಗ ಬರುತ್ತೇನೆ.. ಎಂದು ಹೇಳಿ ಅವರ ಮನೆಗೆ ಹೋಗಿ.. ಮನೆಯವರ ಮನಸ್ಸನ್ನು ತಟ್ಟಿ ನಕ್ಕು ನಲಿದು .. ಮಗಳ ಅಜ್ಜನ ಮನೆಗೆ ಹೊರಟೆವು... ಮತ್ತೆ ಚರಿತೆ ಮರಳಿತು.. ಶ್ರೀಕಾಂತ್ ನೀವು ನಿಮ್ಮ ಕುಟುಂಬ ಬಂದದ್ದು ಬಹಳ ಖುಷಿಯಾಯ್ತು.. ಆದರೆ ಇಂದು ನಿಮಗೆ ಆತಿಥ್ಯ ಕೊಡೋಕೆ ಆಗೋಲ್ಲ.. ತೊಂದರೆ ಇಲ್ಲ ಬೆಳಿಗ್ಗೆ ಉಪಹಾರದಲ್ಲಿ ನಿಮ್ಮನ್ನು ಮುಳುಗಿಸುತ್ತೇವೆ ಎಂದರು.. 

ಮತ್ತೊಮ್ಮೆ ಮಾತು ಮಾತು ಮಾತು.. ಆಕಾಶ ತೂತಾಗಿ ಬೀಳುವಷ್ಟು ಮಾತು.. ಕನಸಿನಲ್ಲೂ ಊಹಿಸಿಕೊಳ್ಳದಷ್ಟು ಮಧುರವಾಗಿ ಕ್ಷಣಗಳು ಕಳೆಯುತ್ತಿದ್ದವು.. ಅರೆ ಹೀಗೂ ಉಂಟೆ . ಬರಿ ಅಂತರ್ಜಾಲದಲ್ಲಿ ಪರಿಚಯವಾಗಿ.. ಇಂದು ಮನಸ್ಸಿನ ಮೇಲೆ ನಡೆಯುತ್ತಿರುವ ಈ ರೀತಿಯ ಪ್ರೀತಿ ವಿಶ್ವಾಸ ನಿಜಕ್ಕೂ ಇದು ಇಂದ್ರಜಾಲವೇ ಎನ್ನಿಸುತ್ತಿತ್ತು.. 

ಬೆಳಿಗ್ಗೆ ಒಂದು ಪುಟ್ಟಾ ಸುತ್ತಾ ಮುತ್ತಾ ಇರುವ ವಿಹಂಗಮ ನೋಟ.. ಜೊತೆಯಲ್ಲಿ ಬಿಸಿ ಬಿಸಿ ಕಾಫಿ.. ಆಹಾ.. ಹಳ್ಳಿಯ ವಾತಾವರಣಕ್ಕೆ ಸಾಟಿ.. ಹಳ್ಳಿಯೇ.. !

ಸಹಸ್ರಲಿಂಗ ಕ್ಷೇತ್ರ ಕೆಲವೇ ನಿಮಿಷಗಳ ಹಾದಿಯಾಗಿದ್ದರಿಂದ..ಅಲ್ಲಿಗೆ ಸಾಗಿದೆವು.. ಬಯಲಿನಲ್ಲಿ ಕಾಣುವ ತಾಣವೆಲ್ಲಾ ಲಿಂಗದ ರೂಪವೇ.. ಒಂದು ಕಡೆ ಲಿಂಗ ಇದ್ದಾರೆ ಇನ್ನೊಂದು ಕಡೆ ಬಸವ.. ಎನಿಸಿದರೆ ಎಣಿಕೆ ತಪ್ಪುತ್ತಿತ್ತು.. ಶಾಲ್ಮಲಾ ನದಿಯ ಹರಿವು ಕಡಿಮೆ ಇದ್ದದರಿಂದ ಕಳೆದ ಬಾರಿ ನೋಡಿದ್ದಕ್ಕಿಂತ ಇನ್ನು ಹೆಚ್ಚಿನ ಲಿಂಗಗಳ ದರ್ಶನ ಸಿಕ್ಕಿತು.. ತೂಗು ಸೇತುವೆಯ ಮೇಲೆ ನಡೆದಾಟ.. ಮರೆಯಲು ಆಗುವುದೇ ಇಲ್ಲಾ.. 



ಅವಳ ಅಜ್ಜನ ಮನೆಯ ತಿಂಡಿ ಬಾ ಬಾ ಎಂದು ಕರೆಯುತ್ತಿತ್ತು.. ಹೊಟ್ಟೆಯ ಮೂಲೆ ಮೂಲೆಗೂ ತುರುಕಿಕೊಂಡು.. ಮಾಮೂಲಿಗಿಂತ ತುಸು ಹೆಚ್ಚೇ ತಿಂದೆವು.. 

ಸರ್ಜಿ ನಮಸ್ಕಾರ.. ನೀವು ಯಾರು ಅಂತ ನನಗೆ ಗೊತ್ತು.. "ಹಾವು ಕಚ್ಚಿದ ಪ್ರಸಂಗ" ಇವತ್ತು ನನ್ನನ್ನು ನಗೆಗಡಲಲ್ಲಿ ಮೀಯಿಸುತ್ತದೆ.. ಅರೆ ಇವರೇ ನಮ್ಮ ಪ್ರಕಾಶಣ್ಣ ಅರ್ಥಾತ್ ಪ್ರಕಾಶ್ ಹೆಗ್ಗಡೆಯವರ ಅಗ್ರಜ.  ಚೋಟೆ ಮೀಯ ಚೋಟೆ ಮಿಯ ಬಡೇ ಮಿಯ ಸುಬಾಹನಲ್ಲ ಎನ್ನುವ ಹಾಗೆ.. ಅಣ್ಣ ತಮ್ಮ ಇಬ್ಬರೂ ಒಂದೊಂದು ನಗೆ ಬಾಂಬುಗಳೇ...  ಮನೆಯವರನ್ನು ಭೇಟಿ ಮಾಡಿದ್ದು ಬಹಳ ಖುಷಿಯಾಗಿತ್ತು.. ಪ್ರಕಾಶಣ್ಣ ಅವರ ಅಣ್ಣ ಅತ್ತಿಗೆ.. ಅಕ್ಕ ಭಾವ ಆಹಾ ಒಂದು ಚಂದದ ಸಂಸಾರ.. ! 

ಅಲ್ಲಿಯೇ ಬಹಳ ಹೊತ್ತು ಇರಬೇಕು ಎನ್ನುವ ಹಂಬಲ ಇದ್ದರೂ.. ವಾಪಾಸ್ ಬೆಂಗಳೂರಿಗೆ ಬರುವ ಪ್ಲಾನ್ ಇದ್ದದರಿಂದ ಅವರ ಬಲವಂತದ ಮಧ್ಯೆಯೂ.. ಅವರಿಗೆ ತುಸು ಬೇಜಾರಾಗಿದ್ದರು ಸಮಾಧಾನ ಪಡಿಸಿ.. ಮತ್ತೆ ಮಾಯ್ನೋರಮನೆಯ ಕಡೆ ನಾಗಾಲೋಟದಿಂದ ಕಾರು ಓಡುತ್ತಿತ್ತು.. !

ಸಿದ್ದಾಪುರಕ್ಕೆ ಬಂದು.. ಕೊಂಚ ಹೊತ್ತು ವಿಶ್ರಮಿಸಿಕೊಂಡೆವು.. ಅಡಿಗೆ ಮನೆಯಿಂದ ಘಮ ಘಮ.. ಹೊಟ್ಟೆ ಚೂರು ಚೂರು ಏನಾದರೂ ಬೇಕು ಎಂದು ಅರಚುತ್ತಿತ್ತು... ಊಟ ರೆಡಿ ಅಣ್ಣಾ ಅಂದಾಗ.. !!!!!

ಸುಮಾರು ನಾಲ್ಕು ಘಂಟೆಗೆ ಹೊರಟೆವು... ಮೊದಲ ಗುರಿ ಇದ್ದದ್ದು ವರದ ಹಳ್ಳಿ ಅಥವಾ ಶ್ರೀಧರ ಸ್ವಾಮಿಗಳ ಆಶ್ರಮ.. ಇದರ ಮಧ್ಯೆ ಇಕ್ಕೇರಿಯ ದರ್ಶನ.. ಎರಡು ತರಾತುರಿಯಲ್ಲಿ ಮುಗಿಸಿ.. ಚಿಕಮಗಳೂರಿನತ್ತ ಓಡುತ್ತಿತ್ತು... 

ಅಣ್ಣಾ.. ಅಣ್ಣಾ.. ಕಣ್ಣು ಕೆಂಪಗೆ ಮಾಡಿಕೊಂಡು ಬಿಕ್ಕಳಿಸುತ್ತಿದ್ದಳು.. ಅಳಬೇಡ ಕಣೋ ಇನ್ನೊಮ್ಮೆ ಮತ್ತೆ ಹೋಗೋಣ.. ಒಂದೆರಡು ಮೂರುದಿನ ನಿಮ್ಮ ಮನೆಯಲ್ಲಿ ಇದ್ದು ಬಿಡ್ತೀನಿ.. ಎಲ್ಲೂ ಹೋಗೋದೇ ಬೇಡ .. ಆಯ್ತಾ!!!

ಏನೋ ಗೊತ್ತಿಲ್ಲ ಅಣ್ಣ.. ನಿಮ್ಮನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೀನಿ.. ಸರಿ ಅಣ್ಣಾ ಸಿಗ್ತೀನಿ ಮತ್ತೆ ಬ್ಲಾಗ್.. ಫೇಸ್ ಬುಕ್, ಜಿಟಾಕ್.. ವ್ಹಾಟ್ಸಪ್.. ಅಣ್ಣ ಒಂದು ಹಗ್ ನಿಮಗೆ ಮತ್ತು ಪುಟ್ಟುಗೆ... 

ಸರಿ ಕಣೋ ಹೊರಡ್ತೀನಿ ಅಂದೇ!!!

ಕಣ್ಣಂಚಿನ ಆ ಮಾತಲ್ಲಿ ನೂರಾರು ಹೇಳಲಾಗದ ಭಾವಗಳು ನಿರೂಪಾಯವಾಗಿ ಸುಮ್ಮನೆ ಕೂತಿದ್ದವು.. 

ಅಣ್ಣಾ ಇನ್ನು ಮುಂದೆ ಪಾ ಎಂದು ಕರೆಯುತ್ತೇನೆ ಎಂದಳು.. ನೀನು ಹೇಗೆ ಕರೆದರೂ ಓಕೆ ಮಗಳೇ ಅಂದೇ.. 

ಸರಿ ಕಣೋ ಬೆಂಗಳೂರಿಗೆ ತಲುಪಿದ ಮೇಲೆ ಮೆಸೇಜ್ ಮಾಡ್ತೀನಿ.. 

ಪಾ ಮೆಸೇಜ್ ಬೇಡ ಕರೆ ಮಾಡಿ... ನಾ ನಿಮ್ಮ ಕರೆಗೆ ಕಾಯ್ತಾ ಇರ್ತೀನಿ.. 

****************************

ರೀ ಶ್ರೀ ರೀ ಶ್ರೀ ರೀ ಶ್ರೀ.. ಆಫೀಸ್ ಗೆ ಹೋಗೋಲ್ವ.. ಆಗಲೇ ಏಳು ಘಂಟೆ.. .. ಸುಮಾರು ಹನ್ನೆರಡು ಘಂಟೆ ಅಷ್ಟೊತ್ತಿಗೆ ಅಲ್ಲಿಗೆ ಬರುತ್ತೇವೆ.. ಹೋಗೋಣ.. ಈಗಲೇ ಕಾರಲ್ಲಿ ಲಗೇಜ್ ಹಾಕಿಬಿಡಿ... !

ಕಣ್ಣುಜ್ಜಿ ಕೊಂಡೆ... ಅರೆ ಇದೇನು.. ಹೋಗುವ ಮೊದಲೇ.. ಕನಸು ಕಂಡು ಬಿಟ್ಟೆನೆ... ಆಹಾ!!!

****************************
ಮತ್ತೆ ಚಡಪಡಿಕೆ ಚಡಪಡಿಕೆ..................................................!